ಎಂಎ ಓದಲು ಊರಿಗೆ ಅರ್ಧತಾಸಿನ ಪಯಣದಷ್ಟು ಸನಿಹದಲ್ಲಿದ್ದ ಮೈಸೂರು ವಿಶ್ವವಿದ್ಯಾನಿಲಯದ ಪಿಜಿ ಸೆಂಟರಿಗೆ ಹೋಗಬೇಕೆಂದು ಆಲೋಚಿಸಿದ್ದೆ. ನನ್ನ ಗುರುಗಳು ನೀನು ಮೈಸೂರಿಗೇ ಹೋಗತಕ್ಕದ್ದು. ಹಾ.ಮಾ.ನಾಯಕ, ಪ್ರಭುಶಂಕರ, ಚನ್ನಯ್ಯ, ಜಿ.ಎಚ್.ನಾಯಕ ಮುಂತಾದವರಿದ್ದಾರೆ ಎಂದರು. ಅಪ್ಪನಿಗೆ ಮಗ ಲಕ್ಕವಳ್ಳಿಯಲ್ಲಿ ಓದುವುದು ಮರ್ಯಾದೆಗೆ ಕುಂದೆನಿಸಿರಬೇಕು. ‘ಎಷ್ಟು ಓದ್ತೀಯೊ ಓದು. ಎಲ್ಲಿಗೆ ಹೋಗ್ತಿಯೊ ಹೋಗು. ನಾನಿದೀನಿ’ ಎಂದ. ಮೈಸೂರಿಗೆ …









