Mysore
24
overcast clouds

Social Media

ಭಾನುವಾರ, 14 ಜೂನ್ 2026
Light
Dark

10 ನೇ ತರಗತಿ ಪಠ್ಯಪುಸ್ತಕಗಳಿಂದ ಪ್ರಜಾಪ್ರಭುತ್ವ ವಿಷಯವನ್ನು ಕೈಬಿಟ್ಟ ಕೇಂದ್ರ ಸರ್ಕಾರ

ನವದೆಹಲಿ: 10ನೇ ತರಗತಿಯ ವಿದ್ಯಾರ್ಥಿಗಳು ಇನ್ನುಮುಂದೆ ಸರ್ಕಾರದಿಂದ ಪ್ರಕಟಿತ ಪಠ್ಯಪುಸ್ತಕಗಳಿಂದ ಪಿರಿಯೋಡಿಕ್‌ ಟೇಬಲ್‌, ಪ್ರಜಾಪ್ರಭುತ್ವ ಹಾಗೂ ಶಕ್ತಿಯ ಮೂಲಗಳ ವಿಷಯಗಳನ್ನು ಕಲಿಯುವುದಿಲ್ಲ. ವಿದ್ಯಾರ್ಥಿಗಳ ಮೇಲಿನ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ವೈವಾರಿಕತೆಯ ಭಾಗವಾಗಿ ಈಗ ವಿಷಯಗಳ ಸಂಪೂರ್ಣ ಅಧ್ಯಾಯಗಳನ್ನು ಅಳಿಸಲಾಗಿದೆ.

10ನೇ ತರಗತಿಯ ಪಠ್ಯಕ್ರಮದಿಂದ ವಿಕಾಸನ ಸಿದ್ದಾಂತವನ್ನು ತೆಗೆದುಹಾಕುವಿಕೆಯು ಈ ವರ್ಷದ ಆರಂಭದಲ್ಲಿ ಹೆಚ್ಚು ಕಳವಳವನ್ನು ಹುಟ್ಟುಹಾಕಿತ್ತು.

ನ್ಯಾಶನಲ್‌ ಕೌನ್ಸಿಲ್‌ ಆಫ್‌ ಎಜುಕೇಶನಲ್‌ ರಿಸರ್ಚ್‌ ಆಂಡ್‌ ಟ್ರೈನಿಂಗ್‌(ಎನ್‌ಸಿಇಆರ್‌ಟಿ) ಹೊಸದಾಗಿ ಬಿಡುಗಡೆ ಮಾಡಿರುವ ಪಠ್ಯ ಪುಸ್ತಕಗಳು ಪಿರಿಯೋಡಿಕ್‌ ಟೇಬಲ್‌ ಅಧ್ಯಾಯ ಸೇರಿದಂತೆ ಮತ್ತಷ್ಟು ಕಡಿತಗಳನ್ನು ಬಹಿರಂಗಪಡಿಸಿದೆ.

ವಿಜ್ಞಾನ ಪಠ್ಯ ಪುಸ್ತಕದಿಂದ ಕೈಬಿಡಲಾದ ವಿಷಯಗಳಲ್ಲಿ ಪರಿಸರ ಸುರಕ್ಷಿತೆ ಹಾಗೂ ಶಕ್ತಿಯ ಮೂಲಗಳ ಅಧ್ಯಾಯಗಳು ಸೇರಿವೆ.

ಇತ್ತೀಚಿನ ಪರಿಷ್ಕರಣೆಯ ನಂತರ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ, ಪ್ರಜಾಪ್ರಭುತ್ವ ಹಾಗೂ ರಾಜಕೀಯ ಪಕ್ಷಗಳ ಸವಾಲುಗಳ ಸಂಪೂರ್ಣ ಅಧ್ಯಾಯಗಳನ್ನು ಕೈಬಿಡಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!