Mysore
22
overcast clouds

Social Media

ಶುಕ್ರವಾರ, 31 ಜುಲೈ 2026
Light
Dark

ಓದುಗರ ಪತ್ರ: ದಸರೆಯಲ್ಲಿ ಕಂಬಳದ ವ್ಯಾಮೋಹವೇಕೇ?

dgp murder case

ವಿಶ್ವವಿಖ್ಯಾತ ಮೈಸೂರು ದಸರೆಗೆ ತನ್ನದೇ ಆದ ಇತಿಹಾಸವಿದೆ. ಇತ್ತೀಚಿನ ವರ್ಷಗಳಲ್ಲಿ ಸಮುದಾಯಗಳಿಗೆ ಅನುಕೂಲವಾಗುವಂತಹ ಇಲ್ಲವೆ ಸ್ಪೂರ್ತಿ ನೀಡುವಂತಹ ಕಾರ್ಯಕ್ರಮಗಳು ಸೇರ್ಪಡೆಯಾಗುತ್ತಿವೆ. ಆದರೆ ಈ ವರ್ಷ ದಿಢೀರ್ ಅಂತ ಕಂಬಳ ಸೇರ್ಪಡೆಗೊಳಿಸಿರುವುದು ಅಚ್ಚರಿ ಜೊತೆಗೆ ವಿವಾದಕ್ಕೂ ಕಾರಣವಾಗಿದೆ. ದಸರಾದಲ್ಲಿ ಕಂಬಳ ಆಯೋಜನೆ ಮಾಡುವುದು ಸರಿಯಲ್ಲ. ಅದು ಕರಾವಳಿ ಭಾಗದ ಸಂಸ್ಕೃತಿ. ಅದಕ್ಕೆ ಅಗತ್ಯವಾದ ವಾತಾವರಣವನ್ನು ಮೈಸೂರಿನಲ್ಲಿ ಸಿದ್ಧಮಾಡಿಕೊಂಡು ಆಯೋಜಿಸಬೇಕೆಂಬ ಹಂಬಲ ಏಕೆ ಬಂದಿದೆ ಎಂಬುದೇ ಹಲವರ ಪ್ರಶ್ನೆಯಾಗಿದೆ.

ಕಂಬಳ ಆಯೋಜನೆಗೆ ಸಿದ್ಧತೆಯ ನೆಪದಲ್ಲಿ ಕಾನೂನು ಉಲ್ಲಂಸಿ ಮರಗಳನ್ನು ಕಡಿದು ಪರಿಸರ ನಾಶ ಮಾಡಲಾಗುತ್ತಿದೆ ಎಂಬುದು ಪರಿಸರ ವಾದಿಗಳು ಹಾಗೂ ಇತರೆ ಸಂಘ ಸಂಸ್ಥಗಳ ಆಕ್ರೋಶ, ಆರೋಪ. ರಾಜ್ಯದ ಹಲವೆಡೆ ಬರ ಆತಂಕದಲ್ಲಿ ರೈತರು ತಲೆಮೇಲೆ ಕೈಹೊತ್ತು ಕೂರುವ ಸ್ಥಿತಿಯಲ್ಲಿದ್ದಾರೆ. ಇಂತಹವರ ನೆರವಿಗೆ ಸರ್ಕಾರ ಮುಂದಾಗಬೇಕೇ ಹೊರತು ಕಂಬಳವನ್ನು ನಡೆಸಿಯೇ ತೀರುತ್ತೇವೆ ಎಂಬ ಹಠ ಒಳ್ಳೆಯದಲ್ಲ. ಇದಕ್ಕೆ ಖರ್ಚುಮಾಡುವ ಹಣವನ್ನು ರೈತರಿಗೆ ಅನುಕೂಲವಾಗುವ ರೀತಿ ಖರ್ಚು ಮಾಡಿದರೆ ಅರ್ಥಪೂಣವಾಗಿರುತ್ತದೆ.

-ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ, ಹೆಚ್. ಡಿ. ಕೋಟೆ ತಾಲ್ಲೂಕು

 

Tags:
error: Content is protected !!