ನಂಜನಗೂಡು : ಕಳಪೆ ಬಿತ್ತನೆ ಬೀಜ ಬಿತ್ತಿದ ಪರಿಣಾಮ ಮಾಜಿ ಶಾಸಕರ ಜಮೀನಿನಲ್ಲಿ ಬತ್ತದ ಪೈರು ಆಳೆತ್ತರಕ್ಕೆ ಬೆಳದಿದ್ದರೂ ಸರಿಯಾಗಿ ಕಾಳು ಕಟ್ಟದೆ ನಷ್ಠವಾಗುತ್ತಿರುವ ಘಟನೆ ನಡೆದಿದೆ.
ನಂಜನಗೂಡು ತಾಲೂಕಿನ ಹೆಜ್ಜಿಗೆ ಗ್ರಾಮದ ರೈತ ಮಾಜಿ ಶಾಸಕ ಹೆಜ್ಜಿಗೆ ಶ್ರೀನಿವಾಸರ ಜಮೀನೀನಲ್ಲಿ ಈ ಬಾರಿ ಬತ್ತದ ಪೈರು ಬೆಳದೂ ಬತ್ತ ಸಿಗದೆ ಕೇವಲ ಹುಲ್ಲಿಗಾಗಿ ಬತ್ತದ ಕೃಷಿ ಮಾಡಿದಂತಾಗಿದೆ.
ರಾಜ್ಯ ರೈತ ಸಂಘದ ಕಾರ್ಯದರ್ಶಿ ಆಗಿರುವ ಶ್ರೀನಿವಾಸನವರ ಪುತ್ರ ಪ್ರಕಾಶ, ನಗರದ ಕಿಸಾನ ಫರ್ಟಿಲೇಸರ್ಸ ಮಳಿಗೆಯಿಂದ ಕಾವೇರಿ ಸೀಡ್ಸ್ ನ ಬತ್ತದ ಬೀಜ ತಂದು ನಾಟಿ ಮಾಡಿದ್ದು ಬತ್ತದ ಪೈರು ಮಾತ್ರ ಸಖತ್ತಾಗಿ ಬೆಳೆದು ನಿಂತಿದ್ದನ್ನು ನೋಡಿದಾಗ ಬೆಳೆ ಬಂಪರ್ ಎಂದುಕೊಂಡೆ ಆದರೆ ಈಗ ಈಗ ನೋಡಿದರೆ ಶೇ% ೨೫ ರಷ್ಠು ಸಹ ಬತ್ತದ ಕಾಳು ಕಟ್ಟೇ ಇಲ್ಲಾ. ಕಳಪೆ ಬೀಜದಿಂದ ನಮಗಾಗುವ ನಷ್ಠಕ್ಕೆ ಯಾರು ಹೊಣೆ ಎನ್ನುತ್ತಾರೆ.
ಕಳಪೆ ಬೀಜದಿಂದಾಗಿ ಹೆಜ್ಜಿಗೆ ಗ್ರಾಮದಲ್ಲಿ ಒಂದು ಎಕರೆಗೆ ಈ ಬೀಜವನ್ನು ತಂದು ನಾಟಿ ಮಾಡಿದ್ದು ತಮಗೀಗ ಶೇ ೭೫ ರಷ್ಟು ನಷ್ಠವಾಗುತ್ತಿದ್ದು, ಈ ಕುರಿತು ಈಗಾಗಲೆ ತಾಲೂಕು ಕೃಷಿ ಅಧಿಕಾರಿಗಳಿಗೆ ದೂರೂ ನೀಡಿದ್ದು ಅವರು ಸ್ಥಳಕ್ಕೆ ಆಗಮಿಸಿ ಬೆಳೆ ಪರಿಕ್ಷೆ ಮಾಡಿಕೊಂಡು ಹೋಗಿದ್ದಾರೆ. ತಾಲೂಕಿನಲ್ಲಿ ಈ ಬತ್ತವನ್ನು ಸಾಕಷ್ಠು ಜನ ಖರಿದಿಸಿ ಬೆಳೆ ಬೆಳದಿದ್ದು ಎಲ್ಲಡೆ ಇದೇ ರೀತಿ ಕಾಳು ಕಟ್ಟಿಲ್ಲ. ಸರ್ಕಾರವೇ ಈಗ ಈ ಕಳಪೆ ಬೀಜದೀಂದಾಗ ನಷ್ಠ ಭರ್ತಿ ಮಾಡಿಕೊಡಲಿ ಎಂದು ಆಗ್ರಹಿಸಿದರು.





