Mysore
26
overcast clouds

Social Media

ಬುಧವಾರ, 06 ಮೇ 2026
Light
Dark

ಹುಣಸೂರು | ಗುಡುಗು-ಸಿಡಿಲು ಸಹಿತ ಸಾಧಾರಣ ಮಳೆ

ಹುಣಸೂರು : ತಾಲ್ಲೂಕಿನ ಹನಗೋಡು ಹೋಬಳಿ ವ್ಯಾಪ್ತಿ ಸೇರಿದಂತೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂಚಿನ ಗ್ರಾಮಗಳಲ್ಲಿ ಸೋಮವಾರ ಸಂಜೆ ಗುಡುಗು-ಸಿಡಿಲು ಸಹಿತ ಸಾಧಾರಣ ಮಳೆಯಾಗಿದೆ.

ದಿಢೀರ್ ಸುರಿದ ಮಳೆಯಿಂದಾಗಿ ಕೆಲ ರೈತರಿಗೆ ಸಂತಸ ಉಂಟಾದರೆ, ಇನ್ನೂ ಕೆಲ ರೈತರಿಗೆ ತೊಂದರೆ ಎದುರಾಗಿದೆ. ಈ ಭಾಗದಲ್ಲಿ ಈಗಾಗಲೇ ಹಿಂಗಾರು ಬೆಳೆ ಕಟಾವು ಮಾಡಿಕೊಂಡು ಶುಂಠಿ, ಬಾಳೆ, ಮರಗೆಣಸು ಸೇರಿದಂತೆ ಇತರೆ ಬೆಳೆಗಳನ್ನು ನಾಟಿ ಮಾಡಿರುವ ರೈತರಿಗೆ ಮಳೆ ಸಹಾಯಕವಾಗಿದ್ದು ಸಂತಸ ಮೂಡಿಸಿದೆ.

ಆದರೆ ಇನ್ನೂ ಕೆಲ ರೈತರು ರಾಗಿ ಹಾಗೂ ಮುಸುಕಿನ ಜೋಳದ ಕಟಾವು ಮಾಡಿ ಒಕ್ಕಣೆ ಮಾಡದೆ ಹೊಲದಲ್ಲೇ ಇಟ್ಟುಕೊಂಡಿದ್ದ ಬೆಳೆಗೆ ಮಳೆ ನೀರು ತಗುಲಿ ಹಾನಿಯಾಗಿರುವುದು ಕಂಡುಬಂದಿದೆ. ಅಲ್ಲದೆ ಜಾನುವಾರುಗಳಿಗೆ ಸಂಗ್ರಹಿಸಿಟ್ಟಿದ್ದ ಒಣಮೇವು ಸಹ ಮಳೆ ನೀರಿನಿಂದ ತೊಯ್ದು ಹಾನಿಯಾಗಿದೆ.

Tags:
error: Content is protected !!