ಪುಷ್ಪ ವೃಷ್ಟಿ..!
ಅತಿವೃಷ್ಟಿ, ಅನಾವೃಷ್ಟಿಯ ವರದಿ
ಬರೆಯುತಿಹರಂತೆ ಸಚಿವರು…
‘ಒಂಬತ್ತು ಜಿಗಳಲ್ಲಿ
ಮೋಡ ಕವಿದ ವಾತಾವರಣ
ಕಾರಣ, ಅಲ್ಲಿಗಿಲ್ಲ ಮಂತ್ರಿ ಗಿರಿ !
ನುಚ್ಚುನೂರಾಯಿತಂತೆ
ಹಲವು ಶಾಸಕರ ಕನಸು..
ಬರ ಸಿಡಿಲು, ಗುಡುಗು ಜೋರು
ಹಾದಿ ಬೀದಿಗಳಲ್ಲಿ ಬೆಂಕಿ ಟೈರು
ಅಲ್ಲಲ್ಲಿ ಹರಿಯುತ್ತಿಹುದು
ಬಂಡಾಯದ ಹೊಳೆ
ತಾವು ಹೆಜ್ಜೆಯಿಟ್ಟಲ್ಲಿ
ಮಿರಿ ಮಿರಿ ಮಿಂಚು ಹೂಮಳೆ !
-ಮ.ಗು.ಬಸವಣ್ಣ, ಮೈಸೂರು



