ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಮತ್ತು ರಾಜ್ಯ ಜಲಸಂಪನ್ಮೂಲ ಸಚಿವ ಎನ್.ಚಲುವರಾಯ ಸ್ವಾಮಿಯವರ ನಡುವಿನ ಆರೋಪ ಮತ್ತು ಪ್ರತ್ಯಾರೋಪಗಳು ದಿನದಿಂದ ದಿನಕ್ಕೆ ತಾರಕಕ್ಕೆ ಹೋಗುತ್ತಿರುವುದು ಪ್ರಜ್ಞಾವಂತರಿಗೆ ಮುಜುಗರ ಉಂಟುಮಾಡುತ್ತಿವೆ.
ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ಒಳಾರ್ಥಗಳನ್ನೊಳಗೊಂಡ ಹೇಳಿಕೆಗಳು ಯಾರಿಗೂ ಭೂಷಣವಲ್ಲ. ನಿಮ್ಮ ವೈಯಕ್ತಿಕ ವಿಚಾರಗಳನ್ನು ಸಾರ್ವಜನಿಕವಾಗಿ ಮಾಧ್ಯಮಗಳ ಮುಂದೆ ಹೇಳಿ ನಿಮ್ಮ ನಿಮ್ಮ ಗೌರವಕ್ಕೆ ಧಕ್ಕೆತಂದುಕೊಳ್ಳುವುದು ಯಾವ ಪುರುಷಾರ್ಥಕ್ಕೆ? ಈಗಾಗಲೇ ಗಬ್ಬೆದ್ದು ಹೋಗಿರುವ ರಾಜಕೀಯ ಕ್ಷೇತ್ರವನ್ನು ಮತ್ತಷ್ಟು ಹೊಲಸು ಮಾಡುವುದು ಬೇಡ.
-ಬೂಕನಕೆರೆ ವಿಜೇಂದ್ರ, ಮೈಸೂರು



