Mysore
24
overcast clouds

Social Media

ಶನಿವಾರ, 05 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ‘ಸಂಧ್ಯಾ ಕಿರಣ’ ಯೋಜನೆಯ ವ್ಯಾಪ್ತಿಗೆ ವಯೋನಿಗದಿ ಬೇಡ

ಓದುಗರ ಪತ್ರ

ಸರ್ಕಾರವು ೭೦ ವರ್ಷದೊಳಗಿನ ನಿವೃತ್ತ ಸರ್ಕಾರಿ ಪಿಂಚಣಿದಾರರಿಗೆ, ಕುಟುಂಬ ಪಿಂಚಣಿದಾರರಿಗೆ ಮತ್ತು ಅವರ ಅರ್ಹ ಅವಲಂಬಿತ ವಿಕಲಚೇತನ ಮಕ್ಕಳ ಆರೋಗ್ಯ ವೈದ್ಯಕೀಯ ಸೌಲಭ್ಯಗಳಿಗಾಗಿ ‘ಸಂಧ್ಯಾ ಕಿರಣ’ ನಗದು ರಹಿತ ಆರೋಗ್ಯ ಯೋಜನೆಯನ್ನು ಜರಿಗೆ ತಂದಿದೆ. ಈ ಯೋಜನೆಯು ’ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್’ ಮೂಲಕ ಅನುಷ್ಠಾನಗೊಳ್ಳುವುದಾಗಿ ಆದೇಶ ಹೊರಡಿಸಲಾಗಿದೆ.

ಈ ಯೋಜನೆಯ ವ್ಯಾಪ್ತಿಯೊಳಗೆ ಸರ್ಕಾರಿ ನೌಕರರು ನಿವೃತ್ತಿ ಹೊಂದಿದ ದಿನಾಂಕದಿಂದ ೭೦ ವರ್ಷ ವಯೋಮಿತಿ ತಲುಪುವವರೆಗೆ ಅಂದರೆ ಹತ್ತು ವರ್ಷ ಮಾತ್ರ ಈ ಸೌಲಭ್ಯ ದೊರಕುವುದು ಎಂದೇ ಅರ್ಥವ್ಯಾಪ್ತಿಯಾಗಿದೆ. ಇದರಿಂದಾಗಿ ೭೦ ವರ್ಷ ಮೀರಿದ ನೌಕರರು ಸಂಧ್ಯಾಕಿರಣ ಸೌಲಭ್ಯದಿಂದ ವಂಚಿತರಾಗುತ್ತಾರೆ. ಎಪ್ಪತ್ತು ವರ್ಷ ದಾಟಿದ ನಂತರವೇ ಸಹಜವಾಗಿ ಆರೋಗ್ಯದಲ್ಲಿ ಏರುಪೇರುಗಳು, ಒತ್ತಡಗಳು, ಅವಲಂಬಿತರ ಆಶ್ರಯ ಕೊರತೆಗಳೂ ಉಂಟಾಗುವುದು.ಇಂಥ ಸಮಸ್ಯೆಗಳ ಪರಿಸ್ಥಿತಿಯನ್ನು ನನ್ನಂಥ ಈ ವಯೋಮಾನದ ನೌಕರರು ಅನುಭವಿಸುತ್ತಿರುವ ನೋವುಗಳೂ ಸಹ. ಆದುದರಿಂದ ಸಂಧ್ಯಾಕಿರಣ ಯೋಜನೆಯ ವ್ಯಾಪ್ತಿಗೆ ೭೦ ವರ್ಷದೊಳಗಿನವರಿಗೆ ಮಾತ್ರ ಸೀಮಿತಗೊಳಿಸದೇ ಎಲ್ಲ ವಯೋಮಾನದವರಿಗೂ ಅನ್ವಯಿಸುವಂತೆ ಮಾಡುವುದರಿಂದ ಸಾಮಾಜಿಕ ನ್ಯಾಯವನ್ನು ಪಾಲಿಸಿದಂತಾಗುತ್ತದೆ. ಸರ್ಕಾರ ಇತ್ತ ಗಮನಹರಿಸಬೇಕು.

-ಜಿ.ಹೆಚ್.ಸಂಕಪ್ಪ, ಮೈಸೂರು

 

Tags:
error: Content is protected !!