Mysore
23
overcast clouds

Social Media

ಶನಿವಾರ, 20 ಜೂನ್ 2026
Light
Dark

ಓದುಗರ ಪತ್ರ: ಎಚ್.ಡಿ.ದೇವೇಗೌಡ ಪತ್ರ ಬರೆದಿರುವುದು ಶ್ಲಾಘನೀಯ

ಕಾಂಗ್ರೆಸ್ ಪಕ್ಷದ ಲೋಕಸಭಾ ಸದಸ್ಯರ ನಡವಳಿಕೆಯನ್ನು ಕುರಿತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಇತ್ತೀಚೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಪತ್ರಬರೆದಿರುವುದು ಶ್ಲಾಘನೀಯವಾದದು.

ವಿರೋಧ ಪಕ್ಷದ ನಾಯಕ ಹಾಗೂ ಸಂಸದರಾದ ರಾಹುಲ್ ಗಾಂಧಿ ಅವರು ತಮ್ಮ ಪಕ್ಷದ ಲೋಕಸಭಾ ಹಾಗೂ ರಾಜ್ಯಸಭಾ ಸಂಸದರ ಜೊತೆಗೂಡಿ ನೂತನ ಸಂಸತ್ ಭವನದ ಮೆಟ್ಟಿಲುಗಳ ಮೇಲೆ ಕುಳಿತು ಚಹ, ಕಾಫಿ, ಬಿಸ್ಕತ್ ಸವಿಯುತ್ತ ಸಂಸತ್ತಿನ ಒಳಗಡೆ ಹೋಗುವ ಬಿಜೆಪಿ ಸಂಸದರನ್ನು ಹಾಗೂ ಕೇಂದ್ರದ ಮಂತ್ರಿಗಳನ್ನು ಚುಡಾಯಿಸಿ, ಕೇಕೆ ಹಾಕುವುದು ಸಂಸದರ ನಡೆಗೆ ಕುಂದು ತರುವುದು ಎಂದು ಪತ್ರದ ಮುಖೇನ ತಿಳಿಸಿರುವುದು ಸ್ವಾಗತಾರ್ಹ.

ಹಿರಿಯ ಸಂಸದರು ಹಾಗೂ ನಾಯಕರು( ಹಿರಿ ಅಕ್ಕನ ಚಾಳಿ ಮನೆಮಂದಿಗೆಲ್ಲ ಎಂಬ ಮಾತಿನಂತೆ ) ತಪ್ಪು ಹಾದಿಯಲ್ಲಿ ನಡೆದರೆ ಯುವ ಸಂಸದರ ಪಾಡೇನು? ಸಂಸತ್ತಿನ ಘನತೆ ಹಾಗೂ ಗೌರವಕ್ಕೆ ಕುಂದು ಬರುವುದರಲ್ಲಿ ಅನುಮಾನವೇ ಇಲ್ಲ.ಇನ್ನು ಮುಂದಾದರೂ ವಿರೋಧ ಪಕ್ಷವು ಆಧಾರರಹಿತ ಆರೋಪ ಮಾಡದೆ ಜವಾಬ್ದಾರಿಯುತವಾಗಿ ವರ್ತಿಸಿ ಸಂಸತ್ತಿನ ಘನತೆಯನ್ನು ಹೆಚ್ಚಿಸುವುದು ಅಗತ್ಯ.

-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು

Tags:
error: Content is protected !!