Mysore
15
few clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಹಿಂದು ಧಾರ್ಮಿಕ ಭಾವನೆ ಒಪ್ಪಿ ದಸರಾ ಉದ್ಘಾಟಿಸಲಿ : ಸಂಸದ ಯದುವೀರ್‌

yaduveer

ಮೈಸೂರು : ಹಿಂದು ಧಾರ್ಮಿಕ ಭಾವನೆಯನ್ನು ಒಪ್ಪಿಕೊಂಡು ಲೇಖಕಿ ಬಾನು ಮುಷ್ತಾಕ್ ಅವರು ನಾಡಹಬ್ಬ ದಸರಾ ಮಹೋತ್ಸವವನ್ನು ಉದ್ಘಾಟಿಸಲಿ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಸೀದಿಗಳಿಗೆ ಮುಸ್ಲಿಂ ಹೆಣ್ಣು ಮಕ್ಕಳನ್ನು ಪ್ರವೇಶಿಸಲು ಅವಕಾಶ ಮಾಡಿಕೊಡುವಂತೆ ಹೋರಾಟ ಮಾಡಿದ್ದಾರೆ. ಅದೇ ರೀತಿ ಹಿಂದುಗಳ ಭಾವನೆಗೆ ಧಕ್ಕೆಯಾಗದ ರೀತಿಯಲ್ಲಿ ನಡೆಯಬೇಕಿದೆ ಎಂದರು.

ಚಾಮುಂಡೇಶ್ವರಿದೇವಿಗೆ ಪೂಜೆ ಸಲ್ಲಿಸಿ ಧಾರ್ಮಿಕವಾದ ಸಂಪ್ರದಾಯದಂತೆ ಚಾಲನೆ ಕೊಡಬೇಕು. ಭುವನೇಶ್ವರಿ, ಕನ್ನಡದ ವಿಚಾರದಲ್ಲಿ ಅಗೌರವ ತೋರುವಂತೆ ಹೇಳಿಕೆ ನೀಡಿರುವ ಅವರು ಹಿಂದು ಧಾರ್ಮಿಕತೆ ವಿಚಾರದಲ್ಲಿ ಹೇಗೆ ನಡೆದುಕೊಳ್ಳುತ್ತಾರೆ ಎಂಬುದು ಮುಖ್ಯವಾಗಿದೆ ಎಂದು ಹೇಳಿದರು.

Tags:
error: Content is protected !!