Mysore
24
broken clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ಜೆಡಿಎಸ್‌ ತೋರೆಯುತ್ತಾರಾ ಜಿ.ಟಿ ದೇವೇಗೌಡ..? ಈ ಬಗ್ಗೆ ಸ್ವತಃ ಅವರೇ ಹೇಳಿದ್ದೇನು..

JDS leaves GT evegowda

ಮೈಸೂರು : ಯಾವ ನಾಯಕರು ನನ್ನನ್ನು ಯಾವ ಪಕ್ಷಕ್ಕೂ ಆಹ್ವಾನಿಸಿಲ್ಲ. ನಾನು ಕಾಂಗ್ರೆಸ್‌ಗೆ ಹೋಗ್ಬೇಕಾ, ಬಿಜೆಪಿಗೆ ಹೋಗ್ಬೇಕಾ ಎಂದು ನನ್ನ ಕ್ಷೇತ್ರದ ಜನ ತೀರ್ಮಾನಿಸ್ತಾರೆ. ನಾನು ಪಕ್ಷಾಂತರ ಮಾಡಲ್ಲ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬಂದುಬಿಡು ಕಾಂಗ್ರೆಸ್‌ಗೆ ಅಂತ ಕರೆದಿಲ್ಲ, ಶಿವಕುಮಾರ್ ಕೂಡ ಕರೆದಿಲ್ಲ, ಚನ್ನಪಟ್ಟಣ ಬೈ ಎಲೆಕ್ಷನಲ್ಲಿ ನನ್ನ ಯಾರು ಕರೆದಿಲ್ಲ, ಹಾಗಂತ ನಾನು ಯಾವ ಪಕ್ಷಕ್ಕೂ ಕೂಡ ಹೋಗಲ್ಲ ಎಂದರು.

ಮುಂದಿನ ಚುನಾವಣೆಯಲ್ಲಿ ಸರ್ಧೆ ಖಚಿತ: ನನ್ನ ಮುಂದೆ ನಿಲ್ಲುವ ಶಕ್ತಿ ಇಲ್ಲದವರು, ನಿನ್ನೆ ಮೊನ್ನೆ ಬಂದ ಶಾಸಕರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸ್ವ ಪಕ್ಷದವರ ಬಗ್ಗಯೇ ಹರಿಹಾಯ್ದ ಜಿಟಿಡಿ, ದೇವೇಗೌಡರ ಜೊತೆ ಬಾವುಟ ಕಟ್ಟಿ ಪಕ್ಷ ಕಟ್ಟಿದವನು ನಾನು.

ಮುಂದೆ ಏನು ಮಾಡ್ಬೇಕು ಅಂತ ಕ್ಷೇತ್ರದ ಹೇಳ್ತಾರೆ. ಜನ ಜೆಡಿಎಸ್ ಅಲ್ಲಿ ಇರು ಅಂದ್ರೆ ಇರ್ತೀನಿ, ಕಾಂಗ್ರೆಸ್ ಗೆ ಹೋಗಿ ಅಂದ್ರೆ ಹೋಗ್ತೀನಿ, ಬಿಜೆಪಿಗೆ ಹೋಗು ಅಂದ್ರು ಹೋಗ್ತೀನಿ. ಆದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡೇ ಮಾಡ್ತೀನಿ ಎಂದು ಹೇಳಿದರು.

Tags:
error: Content is protected !!