Mysore
21
few clouds

Social Media

ಗುರುವಾರ, 20 ಆಗಸ್ಟ್ 2026
Light
Dark

ಬ್ರಾಹ್ಮಣರ ಬುದ್ದಿ ಜನಿವಾರದಲ್ಲಲ್ಲ…ಅವರ ತಲೆಯಲ್ಲಿದೆ ; ಪ್ರತಾಪ್‌ ಸಿಂಹ್‌

prathap simha janivara

ಬೆಂಗಳೂರು: ಸಿದ್ದರಾಮಯ್ಯ ಅವರ ಅವಧಿಯಲ್ಲಿ ಬ್ರಾಹ್ಮಣರು ಸಾಫ್ಟ್‌ ಟಾರ್ಗೆಟ್‌ ಆಗಿದ್ದಾರೆ. ಬ್ರಾಹ್ಮಣರ ಸಂಖ್ಯೆ ಬಹಳ ಕಡಿಮೆ ಇರುವುದರಿಂದ ಪ್ರತಿರೋಧ ತೋರುವುದಿಲ್ಲ ಎಂಬ ಬಾವನೆ ಅವರಿಗಿದೆ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಕಚೇರಿ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಡುಪಿಯ ಹಿಜಾಬ್‌ ವಿಚಾರ ಬಂದಾಗ ಸಿದ್ದರಾಮಯ್ಯ ಪ್ರಬಲವಾಗಿ ಪ್ರತಿಪಾದಿಸಿರು. ಆದರೆ, ಜನಿವಾರ ಪ್ರಕರಣದಲ್ಲಿ ಯಾಕೆ ಸುಮ್ಮನಿದ್ದಾರೆ? ಜನಿವಾರದಲ್ಲಿ ಏನಾದ್ರೂ ಲೋಪ ಕಾಣುತ್ತಿದ್ಯಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:- ನಿಜವಾದ ಚೆಂಗ್ಲು ಡಿ.ಕೆ.ಶಿವಕುಮಾರ್: ಬಿಜೆಪಿ ಶಾಸಕ ಮುನಿರತ್ನ

ಸಿದ್ದರಾಮಯ್ಯನವರೇ, ಬ್ರಾಹ್ಮಣರ ಬುದ್ಧಿವಂತಿಕೆ ಜನಿವಾರದಲ್ಲಲ್ಲ ಅವರ ತಲೆಯಲ್ಲಿದೆ. ವೇದ ಉಪನಿಷತ್ತುಗಳ ಕಾಲದಿಂದ ಇದುವರೆಗೂ ಜ್ಞಾನ ಸಂಪತ್ತನ್ನು ತಲೆಮಾರಿನಿಂದ ತಲೆಮಾರಿಗೆ ತರುತ್ತಿರುವವರು ಬ್ರಾಹ್ಮಣರು. ನಿಮ್ಮ ಮದುವೆ, ಮುಂಜಿಗೂ ಬ್ರಾಹ್ಮಣರು ಬೇಕು, ಸತ್ತ ಮೇಲೆ ಮುಕ್ತಿ ಕೊಡಿಸುವ ಪ್ರಕ್ರಿಯೆಗೂ ಬ್ರಾಹ್ಮಣರು ಬೇಕು. ಆದರೂ ಬ್ರಾಹ್ಮಣರ ದ್ವೇಷ! ಎಂದು ಹೇಳಿದ್ದಾರೆ.

Tags:
error: Content is protected !!