ರಾಜಸ್ಥಾನ : 199 ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಮೂಲಕ ರಾಜಸ್ಥಾನದಲ್ಲಿ ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಹಿಡಿದಿದೆ.
ಸೋತ ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಕೆಲವು ಪ್ರಮುಖವಾಗಿ ಖಜುವಾಲಾದಲ್ಲಿ ಬಿಜೆಪಿಯ ವಿಶ್ವನಾಥ್ ಮೇಘವಾಲ್ ವಿರುದ್ಧ ಸಚಿವ ಗೋವಿಂದ್ ರಾಮ್ ಮೇಘವಾಲ್ ಪರಾಭವಗೊಂಡರು ಮತ್ತು ಸಪೋತ್ರದಲ್ಲಿ ಬಿಜೆಪಿಯ ಹಂಸರಾಜ್ ಮೀನಾ ವಿರುದ್ಧ ರಮೇಶ್ ಮೀನಾ ಸೋಲನುಭವಿಸಿದ್ದು, ಹಲವರು ಈ ಪಟ್ಟಿಗೆ ಸೇರಿದ್ದಾರೆ.
ಸೋತ ಪ್ರಮುಖ ಕಾಂಗ್ರೆಸ್ ಸಚಿವರ ನೋಟ:
- ಸಪೋತ್ರದಲ್ಲಿ ರಮೇಶ್ ಚಂದ್ ಮೀನಾ 43,000 ಮತಗಳಿಂದ
- ದೀಗ್-ಕುಮ್ಹೆರ್ನಲ್ಲಿ ವಿಶ್ವೇಂದ್ರ ಸಿಂಗ್ 7,000 ಮತಗಳಿಂದ
- ಸಿವಿಲ್ ಲೈನ್ಸ್ನಲ್ಲಿ ಪ್ರತಾಪ್ ಸಿಂಹ ಖಚರಿಯಾ ಅವರು 28,000 ಮತಗಳಿಂದ
- ಬನ್ಸೂರಿನಲ್ಲಿ ಶಕುಂತಲಾ ರಾವತ್ 15,000 ಮತಗಳಿಂದ
- ಕೊಟ್ಪುಟ್ಲಿಯಲ್ಲಿ ರಾಜೇಂದ್ರ ಸಿಂಗ್ ಯಾದವ್ 300ಕ್ಕೂ ಹೆಚ್ಚು ಮತಗಳಿಂದ
- ಕೋಲಾಯತ್ನಲ್ಲಿ ಭನ್ವರ್ ಸಿಂಗ್ ಭಾಟಿ 32,000 ಮತಗಳಿಂದ
ತೆಲಂಗಾಣದಲ್ಲಿ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮತ್ತು ಅವರ ಮಗ ಕೆ ಟಿ ರಾಮರಾವ್ ಅವರು ಸಹಾ ಚುನವಾಣೆಯಲ್ಲಿ ಸೋಲು ಕಂಡಿದ್ದಾರೆ.





