Mysore
24
scattered clouds

Social Media

ಭಾನುವಾರ, 26 ಏಪ್ರಿಲ 2026
Light
Dark

ಹರ ಹರ ಮಹಾದೇವ ಘೋಷಣೆಯೊಂದಿಗೆ ಚಾರ್‌ ಧಾಮ್‌ ಯಾತ್ರೆ ಆರಂಭ

Landslide Due to Rain in Uttarakhand: Kedarnath Yatra Temporarily Suspended

ಉತ್ತರಾಖಂಡ್:‌ ಇಲ್ಲಿನ ಪವಿತ್ರ ಚಾರ್‌ ಧಾಮ್‌ ಯಾತ್ರೆ ಇಂದಿನಿಂದ ಅಧಿಕೃತವಾಗಿ ಪ್ರಾರಂಭವಾಗಿದೆ. ಭಕ್ತರ ದರ್ಶನಕ್ಕಾಗಿ ಕೇದಾರನಾಥ ದೇವಾಲಯದ ದ್ವಾರಗಳನ್ನು ಇಂದು ಬೆಳಿಗ್ಗೆ ತೆರೆಯಲಾಯಿತು.

ಆರುತಿಂಗಳ ಸುದೀರ್ಘ ಕಾಯುವಿಕೆಯ ನಂತರ ವೈದಿಕ ಮಂತ್ರಘೋಷಗಳೊಂದಿಗೆ ಬಾಬಾ ಕೇದಾರನಾಥ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಭಾರತ ಮತ್ತು ವಿಶ್ವದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಈ ಪವಿತ್ರ ಕ್ಷಣಕ್ಕೆ ಸಾಕ್ಷಿಯಾದರು. ಇಡೀ ದೇವಾಲಯದ ಆವರಣ ಜೈ ಶ್ರೀ ಕೇದಾರ್‌ ಮತ್ತು ಹರ ಹರ ಮಹಾದೇವ ಎಂಬ ನಾಮಸ್ಮರಣೆಯಿಂದ ಮೊಳಗಿತು.

ಈ ವರ್ಷ ಕೇದಾರನಾಥ ದರ್ಶನಕ್ಕಾಗಿ ಈಗಾಗಲೇ 4.50 ಲಕ್ಷಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ.

ಆನ್‌ಲೈನ್‌ ನೋಂದಣಿ ಮಾಡಿಕೊಂಡವರಿಗೆ ಮಾತ್ರ ಯಾತ್ರೆಗೆ ಅನುಮತಿ ನೀಡಲಾಗುತ್ತಿದೆ. ಹೆಲಿಕಾಪ್ಟರ್‌ ಬುಕ್ಕಿಂಗ್‌ ಮತ್ತು ಟ್ರೆಕ್ಕಿಂಗ್‌ ನಿಯಮಗಳ ವಿವರಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

Tags:
error: Content is protected !!