Mysore
22
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ಮೈಸೂರು | ನೆಟ್ಟ ಗಿಡಗಳಿಗೆ ಮೆಟಲ್‌ ಗಾರ್ಡ್‌ ಹಾಕಿ ರಕ್ಷಣೆ

ಮೈಸೂರು: ನಗರದ ಎಸ್ಪಿ ಕಚೇರಿಯ ಪಕ್ಕದ ರಸ್ತೆಯಲ್ಲಿ ಕಟಾವು ಮಾಡಿದ್ದ 40 ಮರಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದ ವಿವಿಧ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ನಿನ್ನೆ ತಾನೇ ಅದೇ ರಸ್ತೆಯಲ್ಲಿ ಗಿಡಗಳನ್ನು ನೆಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಇಂದು ಅದೇ ಗಿಡಗಳಿಗೆ ಗಾರ್ಡ್‌ಗಳನ್ನು ಹಾಕುವ ಮೂಲಕ ರಕ್ಷಣೆಗೆ ಮುಂದಾಗಿದ್ದಾರೆ.

ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ನಿನ್ನೆ ಮರಗಳನ್ನು ಕಡಿದ ಜಾಗದಲ್ಲಿ ನೆಟ್ಟ ಸಸಿಗಳಿಗೆ ರೈತ ಸಂಘದ ಪ್ರಮುಖರು ರಘು ಲಾಲ್ ಕಂಪನಿಯ ರಾಘವನ್ ಅವರೊಂದಿಗೆ ಚರ್ಚಿಸಿ, ರಘುಲಾಲ್ ಕಂಪನಿಯ ವತಿಯಿಂದ ಮೆಟಲ್ ಗಾರ್ಡ್‌ಗಳನ್ನು ಪಡೆದುಕೊಂಡು ಇಂದು ರೈತ ಸಂಘವು ಮೆಟಲ್ ಗಾರ್ಡ್‌ಗಳನ್ನು ಸಸಿಗಳ ಸುತ್ತ ಹಾಕಿ ನೆಲಕ್ಕೆ ಕಾಂಕ್ರೀಟ್ ಹಾಕುವ ಮೂಲಕ ಅದನ್ನು ಭದ್ರಪಡಿಸುವ ಕೆಲಸ ಮಾಡಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮಂಜು ಕಿರಣ್ ನೇತೃತ್ವದಲ್ಲಿ ಗಿಡಗಳ ರಕ್ಷಣೆಗೆ ಗಾರ್ಡ್‌ಗಳನ್ನು ಅಳವಡಿಸಲಾಗಿದೆ.

ಇದನ್ನೂ ಓದಿ:- ಮೈಸೂರು| ಮರಗಳ ಮಾರಣಹೋಮ ಖಂಡಿಸಿ ಪುಟಾಣಿಗಳಿಂದ ಪ್ರತಿಭಟನೆ

Tags:
error: Content is protected !!