Mysore
25
broken clouds

Social Media

ಶನಿವಾರ, 08 ಆಗಸ್ಟ್ 2026
Light
Dark

ಓದುಗರ ಪತ್ರ | ನೀರು ಬಿಟ್ಟು ರೈತರಿಗೆ ಅನುಕೂಲ ಕಲ್ಪಿಸಿ

dgp murder case

ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯು ವನಸಿರಿ ನಾಡು ಎಂದೆ ಪ್ರಸಿದ್ಧಿ ಪಡೆದಿದೆ ಹಾಗೆ ಜಲಾಶಯಗಳ ಬೀಡು ಎಂದು ಹೆಸರು ಪಡೆದುಕೊಂಡಿದೆ. ಈಗ ಕೇರಳ ರಾಜ್ಯದಲ್ಲಿ ಹೆಚ್ಚು ಹೆಚ್ಚು ಮಳೆಯಾಗಿರುವುದರಿಂದ ಕಬಿನಿ ಜಲಾಶಯವು ತುಂಬಿದೆ. ಆದರೆ ತಾರಕ ಜಲಾಶಯ ತುಂಬಬೇಕಾದರೆ ಇನ್ನು ಸಾಕಷ್ಟು ದಿನ ಬೇಕಾಗುತದೆ. ಆದ್ದರಿಂದ ಕಬಿನಿ ಜಲಾಶಯದಿಂದ ತಾರಕ ಜಲಾಶಯಕ್ಕೆ ನೀರನ್ನು ತುಂಬಿಸಬಹುದು.

ಆದರೆ ವಿದ್ಯುತ್ ಬಿಲ್ಲು ಬಾಕಿ ಇರುವುದರಿಂದ ವಿದ್ಯುತ್ ಸ್ಥಗಿತಗೊಳಿಸಲಾಗಿದ್ದು, ಇದರಿಂದ ಲಿಪ್ತಿಕೇಶನ್‌ಗೆ ಬಹಳ ಸಮಸ್ಯೆ ಆಗಿದೆ.

ಹಾಗೆಯೇ ಮಧ್ಯೆ ಮಧ್ಯೆ ನೀರಿನ ಪೈಪುಗಳು ದುರಸ್ತಿಯಲ್ಲಿವೆ. ಕಬಿನಿ ಜಲಾಶಯದಿಂದ ತಾರಕ ಜಲಾಶಯಕ್ಕೆ ನೀರನ್ನು ಬಿಟ್ಟರೆ, ಹೆಬ್ಬಾಳ ಜಲಾಶಯವು ತುಂಬಿಕೊಳ್ಳುತ್ತದೆ. ಇದರಿಂದ ಬೆಳಗನಹಳ್ಳಿ, ಕಾವಲ, ಹೈರಿಗೆ, ಮಾಲಾರ ಕಾಲೋನಿ, ಮಾದಾಪುರ, ದೇವರಾಜ್ ಕಾಲೋನಿ, ಕೋಳಗಾಲ, ಗುಜಪ್ಪನಹುಂಡಿ. ಹಾಗೂ ಇತರೆ ಗ್ರಾಮಗಳ ರೈತರು ಭತ್ತ, ಜೋಳ ಹಾಗೂ ಕಡಲೆಕಾಯಿ, ಕಬ್ಬು ಹಾಗೂ ಇತರೆ ಬೆಳೆಗಳನ್ನು ಬೆಳೆಯಲು ಅವಕಾಶ ಸಿಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಽಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು.

– ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ, ಹೆಚ್. ಡಿ. ಕೋಟೆ ತಾಲ್ಲೂಕು

Tags:
error: Content is protected !!