Mysore
28
light rain

Social Media

ಶನಿವಾರ, 13 ಜೂನ್ 2026
Light
Dark

ನಾಗರಹೊಳೆ: ಕಾಡಾನೆ ದಾಳಿಗೆ ಅರಣ್ಯ ವೀಕ್ಷಕ ಸಾವು

ಮೈಸೂರು: ನಾಗರಹೊಳೆ ಅರಣ್ಯ ವ್ಯಾಪ್ತಿಯ ಮೇಟಿಕುಪ್ಪೆ ವಲಯದಲ್ಲಿ ಶನಿವಾರ ತಡರಾತ್ರಿ ಕಾಡಾನೆ ದಾಳಿಗೆ ಸಿಲುಕಿ ಮಹದೇವಸ್ವಾಮಿ ಎಂಬ ಅರಣ್ಯ ವೀಕ್ಷಕ (ದಿನಗೂಲಿ ನೌಕರ) ಸಾವನ್ನಪ್ಪಿದ್ದಾರೆ.

ನಾಗರಹೊಳೆ ಅರಣ್ಯ ವ್ಯಾಪ್ತಿಯ ಮೇಟಿಕುಪ್ಪೆ ವಲದ ವ್ಯಾಪ್ತಿಯಲ್ಲಿ ಕಳೆದ ಕೆಲದಿನಗಳಿಂದ ಕಾಡಾನೆ ಹಾವಳಿ ಇದ್ದ ಭಾಗದಲ್ಲಿ ಆನೆಯನ್ನು ಕಾಡಿಗೆ ಹಿಮ್ಮೆಟ್ಟಿಸಲಾಗುತ್ತು. ಅದರಂತೆ ಡಿ.31ರ ತಡರಾತ್ರಿ ಆನೆಯನ್ನು ಹಿಮ್ಮೆಟ್ಟಿಸುವ ವೇಳೆ ಏಕಾಏಕಿ ದಾಳಿ ನಡೆಸಿದ ಕಾಡಾನೆ ಮಹದೇವಸ್ವಾಮಿ ಎಂಬ ವೀಕ್ಷಕನನ್ನು ಬಲಿ ಪಡೆದುಕೊಂಡಿದೆ. ದಾಳಿಯ ತೀವ್ರತೆಗೆ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತ ದೇಹವನ್ನು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.

ಶುಕ್ರವಾರವಷ್ಟೇ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಚಿಕ್ಕ ಬೀಚನಹಳ್ಳಿಯ ಬಳಿ ಕಾಡಾನೆ ದಾಳಿಗೆ ರೈ ಮಹಿಳೆಯೊಬರು ಬಲಿಯಾಗಿದ್ದರು. ಒಂದು ದಿನದ ಅಂತರದಲ್ಲಿ ಇಬ್ಬರು ಕಾಡಾನೆ ದಾಳಿಗೆ ಬಲಿಯಾದಂತಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!