ಮೈಸೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪ್ರಕರಣದಲ್ಲಿ ನವೀನ್ಗೌಡ ಎಂಬುವವರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಲಿ. ಅವನ ಮೂಲಕವೇ ಪೆನ್ಡ್ರೈವ್ ಇತಿಹಾಸ ತಿಳಿಯುತ್ತದೆ ಎಂದು ಅರಕಲಗೂಡು ಶಾಸಕ ಎ.ಮಂಜು ಆಗ್ರಹಿಸಿದ್ದಾರೆ.
ಅರಕಲಗೂಡು ಶಾಸಕ ಎ.ಮಂಜುಗೆ ಏ.21 ರಂದು ಪೆನ್ಡ್ರೈವ್ ನೀಡಿದ್ದೆ ಎಂದು ಸಾಮಾಜಿಕ ಜಾಲಾತಾಣದಲ್ಲಿ ಹೇಳಿಕೆ ನೀಡಿರುವ ನವೀನ್ಗೌಡ ಕುರಿತು ನಗರದಲ್ಲಿ ಇಂದು(ಮೇ.12) ಮಾತನಾಡಿದ ಅವರು, ಏ.21 ರಂದು ಮದುವೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇನೆ. ಅಲ್ಲಿ ನೂರಾರು ಜನರನ್ನು ಮಾತನಾಡಿಸಿದ್ದೇನೆ. ಅವರಲ್ಲಿ ನವೀನ್ಗೌಡ ಯಾರು ಎಂಬುದು ನನಗೆ ತಿಳಿದಿಲ್ಲ. ಪೆನ್ಡ್ರೈವ್ ಪ್ರಕರಣಕ್ಕೂ ನನಗು ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಆತ ನನಗೆ ಪೆನ್ಡ್ರೈವ್ ಕೊಟ್ಟಿಲ್ಲ. ಆತನ ಹಿಂದೆ ಯಾರೋ ಪ್ರಬಲರು ಇರುವುದು ಸತ್ಯ. ಆ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.