Mysore
25
overcast clouds

Social Media

ಮಂಗಳವಾರ, 12 ಮೇ 2026
Light
Dark

ಇಂದಿನಿಂದ ಮೈಸೂರು-ಚೆನ್ನೈ ನಡುವಿನ 2ನೇ ವಂದೇ ಭಾರತ್‌ ರೈಲು ಸಂಚಾರ ಪ್ರಾರಂಭ

ಬೆಂಗಳೂರು : ಇಂದಿನಿಂದ ಮೈಸೂರು- ಚೆನೈ ನಡುವಿನ ಎರಡನೇ ವಂದೇ ಭಾರತ್‌ ರೈಲು ಸಂಚಾರ ಪ್ರಾರಂಭವಾಗಲಿದೆ.

ಪ್ರೀಮಿಯಂ ರೈಲನ್ನು ನಿರ್ವಹಿಸಲು ನೈಋತ್ಯ ರೈಲ್ವೆ ಮೈಸೂರಿನಲ್ಲಿ ಅಗತ್ಯ ಸೌಲಭ್ಯಗಳನ್ನು ಸಿದ್ಧಪಡಿಸಿದೆ ಎಂದು ನೈಋತ್ಯ ರೈಲ್ವೆ (ಸಿಪಿಆರ್‌ಒ) ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ್ ಕನಮಡಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 12 ರಂದು ರೈಲಿಗೆ ಹಸಿರು ನಿಶಾನೆ ತೋರಿದ್ದರು. ವಂದೇ ಭಾರತ್ ರೈಲುಗಳನ್ನು ನಿರ್ವಹಿಸಲು ಮೈಸೂರಿಗೆ ಸೌಲಭ್ಯವಿಲ್ಲದ ಕಾರಣ ಮಾರ್ಚ್ 14 ಮತ್ತು ಏಪ್ರಿಲ್ 4 ರ ನಡುವೆ, ಈ ರೈಲು ಎಸ್‌ಎಂವಿಟಿ ಬೆಂಗಳೂರು ಮತ್ತು ಚೆನ್ನೈ ಸೆಂಟ್ರಲ್ ನಡುವೆ ಚಲಿಸಿತು.

ಶುಕ್ರವಾರದಿಂದ (ಏಪ್ರಿಲ್ 5) ರೈಲು (20663/20664) ಮೈಸೂರು ಮತ್ತು ಚೆನ್ನೈ ಸೆಂಟ್ರಲ್ ನಡುವೆ ಕೆಎಸ್‌ಆರ್ ಬೆಂಗಳೂರು ಮೂಲಕ ಚಲಿಸಲಿದೆ ಎಂದು ಕನಮಡಿ ತಿಳಿಸಿದ್ದಾರೆ.

ಏಪ್ರಿಲ್ 5 ರಿಂದ ಜುಲೈ 29 ರವರೆಗೆ ಈ ರೈಲು ಬುಧವಾರ . ಮತ್ತು ಜುಲೈ 30 ರಿಂದ, ಇದು ಗುರುವಾರ ಇರುವುದಿಲ್ಲ. ದಿನದ ಬದಲಾವಣೆಗೆ ಯಾಂತ್ರಿಕ ನಿರ್ಬಂಧಗಳು ಕಾರಣ ಎಂದು ನೈಋತ್ಯ ರೈಲ್ವೆ ಹೇಳಿದೆ.

ಏಪ್ರಿಲ್ 5 ರಿಂದ ಜುಲೈ 29 ರವರೆಗೆ ಈ ರೈಲು ಬುಧವಾರ . ಮತ್ತು ಜುಲೈ 30 ರಿಂದ, ಇದು ಗುರುವಾರ ಇರುವುದಿಲ್ಲ.

ದಿನದ ಬದಲಾವಣೆಗೆ ಯಾಂತ್ರಿಕ ನಿರ್ಬಂಧಗಳು ಕಾರಣ ಎಂದು ನೈಋತ್ಯ ರೈಲ್ವೆ ಹೇಳಿದೆ.

ಇದು ಮೈಸೂರು ಮತ್ತು ಚೆನ್ನೈ ನಡುವಿನ ಎರಡನೇ ವಂದೇ ಭಾರತ್ ಎಕ್ಸ್ ಪ್ರೆಸ್ ಆಗಿದೆ. ಮೊದಲನೆಯದು (ರೈಲು ಸಂಖ್ಯೆಗಳು 20607/20608) ನವೆಂಬರ್ 2022 ರಿಂದ ಚಲಿಸುತ್ತಿದೆ. ಚೆನ್ನೈ ಸೆಂಟ್ರಲ್ನಿಂದ ಬೆಳಗ್ಗೆ 5.50ಕ್ಕೆ ಹೊರಡುವ ರೈಲು ಮಧ್ಯಾಹ್ನ 12.20ಕ್ಕೆ ಮೈಸೂರು ತಲುಪಲಿದೆ. ಮೈಸೂರಿನಿಂದ ಮಧ್ಯಾಹ್ನ 1.05ಕ್ಕೆ ಹೊರಡುವ ರೈಲು ರಾತ್ರಿ 7.20ಕ್ಕೆ ಚೆನ್ನೈ ಸೆಂಟ್ರಲ್ ತಲುಪಲಿದೆ. ಇದನ್ನು ದಕ್ಷಿಣ ರೈಲ್ವೆ ಚೆನ್ನೈನಲ್ಲಿ ನಿರ್ವಹಿಸುತ್ತದೆ.

 

Tags:
error: Content is protected !!