Mysore
26
overcast clouds

Social Media

ಶನಿವಾರ, 11 ಏಪ್ರಿಲ 2026
Light
Dark

ಮಡಿಕೇರಿ | ಕಾಡಾನೆ ದಾಳಿಗೆ ರೈತ ಬಲಿ

* ಘಟನಾ ಸ್ಥಳಕ್ಕೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯೆ ಸಂಕೇತ್ ಪೂವಯ್ಯ ಭೇಟಿ -ಕುಟುಂಬಸ್ಥರಿಗೆ ಸಾಂತ್ವನ

ಸಿದ್ದಾಪುರ : ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯ ಜಯಂತ್ ರವರ ತಂದೆ ಸೊಳ್ಳೆ ಕೋಡಿ ಚಿಣ್ಣಪ್ಪ (76) ಎಂಬುವರು ಇಂದು ಬೆಳಗಿನ ಜಾವ 2 ಗಂಟೆ ಸಮಯಕ್ಕೆ ಕರಡಿಗೋಡುವಿನ ಬಸವನಹಳ್ಳಿ ಹಾಡಿ ಸಮೀಪದಲ್ಲಿರುವ ಮನೆಯಿಂದ ಹೊರಗೆ ಬಂದ ಸಂದರ್ಭ ಮನೆಯ ಮುಂಭಾಗದಲ್ಲಿದ್ದ ಕಾಡಾನೆ ಅವರ ಮೇಲೆ ದಿಢೀರ್ ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ನಡೆದಿದೆ.

ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಬೆಳಗಿನ ಜಾವ ಸುಮಾರು 4 ಗಂಟೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನವನ್ನು ಹೇಳಿದರು.

ನಂತರ 5 ಗಂಟೆ ಹೊತ್ತಿಗೆ ಮೃತದೇಹವನ್ನು ಪೊಲೀಸರು ಹಾಗೂ ಅರಣ್ಯ ಇಲಾಖೆಯವರು ಸಿದ್ದಾಪುರ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.

ಸಿದ್ದಾಪುರ ಕಾಂಗ್ರೆಸ್ ಪಕ್ಷದ ಝೋನಲ್ ಅಧ್ಯಕ್ಷರಾದ ಎಸ್. ಬಿ ಪ್ರತೀಶ್ ವಲಯ ಅರಣ್ಯ ಅಧಿಕಾರಿ ರತನ್ ಹಾಗೂ ಸಿಬ್ಬಂದಿಗಳು, ಸಿದ್ದಾಪುರ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳದಲ್ಲಿ ಹಾಜರಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Tags:
error: Content is protected !!