Mysore
21
overcast clouds

Social Media

ಭಾನುವಾರ, 14 ಜೂನ್ 2026
Light
Dark

ಹೆಡಿಯಾಲ ಅಂಗನವಾಡಿ : ಆಹಾರದಲ್ಲಿ ಹುಳು

ನಂಜನಗೂಡು: ತಾಲ್ಲೂಕಿನ ಹೆಡಿಯಾಲದ ಅಂಗನವಾಡಿಗೆ ಹುಳು ಹಿಡಿದ ಆಹಾರಗಳು ಮತ್ತೆ ಸರಬರಾಜಾಗುತ್ತಿರುವ ಆತಂಕಕಾರಿ ಘಟನೆ ನಡೆದಿದೆ.

ಅಂಗನವಾಡಿಗೆ ಪೂರೈಕೆಯಾಗುತ್ತಿರುವ ಆಹಾರ ಪುಟ್ಟಗಳಲ್ಲಿರುವ ಪದಾರ್ಥಗಳು ಹುಳು ಹಿಡಿದಿರುವುದು ಕಂಡುಬಂದಿದೆ. ಕಳೆದ ವರ್ಷವೂ ಇದೇ ರೀತಿ ಹುಳುಹಿಡಿದ ಆಹಾರ ಪದಾರ್ಥಗಳು ಸರಬರಾಜಾಗಿದ್ದ
ಹಿನ್ನಲೆಯಲ್ಲಿ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡುತ್ತಿದ್ದ ಎಂಎಸ್‌ಪಿಸಿ ಏಜೆನ್ಸಿಯನ್ನು ರದ್ದು ಮಾಡಿ
ಬೇರೆ ಕಡೆಯಿಂದ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಲಾಗುತ್ತಿತ್ತು.
ಇಂತಹ ಹುಳು ಹಿಡಿದ ಅಹಾರ ಪದಾರ್ಥಗಳನ್ನು ಅಂಗನವಾಡಿಯ ಮಕ್ಕಳಿಗೆ ಪೂರೈಕೆ ಮಾಡುತ್ತಿದ್ದ ಈ ಸಂಸ್ಥೆಯ ವಿರುದ್ಧ ಕೇಂದ್ರ ಅಹಾರ ಸಂಶೋಧನಾಯದ ಅಧಿಕಾರಿಗಳು ದಾಳಿ ನಡೆಸಿ, ನೀಡಿದ ವರದಿಯ ಮೇಲೆ ಈ ಸಂಸ್ಥೆಯ ಆಹಾರ ಪೂರೈಕೆಯ ಪರವಾನಗಿಯನ್ನು ಆಗ ರದ್ದು ಮಾಡಲಾಗಿತ್ತು
ಆದರೆ, ಈ ವರದಿಗೆ ಮೂರೇ ತಿಂಗಳಲ್ಲಿ ಧೂಳು ಹಿಡಿಸಿ ತಾಲ್ಲೂಕಿನ ಅಂಗನವಾಡಿಗಳಿಗೆ ಅಹಾರ ಪೂರೈಸುವ ಪರವಾನಗಿಯನ್ನು ಎಂಎಸ್‌ಪಿಸಿ ಪಡೆಯಲು ಯಶಸ್ವಿಯಾಗಿತ್ತು.
ಈಗ ಮತ್ತೆ ತಾಲೂಕಿನ ಅಂಗನವಾಡಿಗಳಿಗೆ ಹುಳು ಹಿಡಿದ ಅಹಾರ ಪದಾರ್ಥಗಳು ಸರಬರಾಜಾಗುತ್ತಿರುವುದು ಬಹಿರಂಗವಾಗಿದ್ದು, ಸರ್ಕಾರ ಹಾಗೂ ಇಲಾಖೆಯ ಅಧಿಕಾರಿಗಳು ಸಂಬಂಧಪಟ್ಟವರ ವಿರುದ್ಧ ಈಗಲಾದರೂ ಕ್ರಮ ಜರುಗಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!