Mysore
30
clear sky

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಇಸ್ರೆಲ್‌ ವಿರುದ್ಧ ಮತ ಚಲಾಯಿಸಿ ಅಚ್ಚರಿ ಮೂಡಿಸಿದ ಪ್ರಧಾನಿ ಮೋದಿ

ನವದೆಹಲಿ : ಪ್ಯಾಲೆಸ್ತೀನ್‌ ನಲ್ಲಿ ಇಸ್ಸ್ರೇಲ್‌ ವಾಸನೆಲೆಗಳನ್ನು ಸ್ಥಾಪಿಸಿರುವುದು ಅಕ್ರಮ ಎಂದು ಸಾರುವ ನಿರ್ಣಯವನ್ನು ಬೆಂಬಲಿಸಿ ಭಾರತ ಮತ ಹಾಕಿರುವ ಕುರಿತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಅಕ್ರಮಿತ ಪ್ಯಾಲೆಸ್ತೀನ್‌ ಭೂಭಾಗ ಹಾಗೂ ಸಿರಿಯನ್‌ ಗೋಲನ್‌ನಲ್ಲಿ ಇಸ್ರೇಲ್‌ ವಸಾಹತು ಸ್ಥಾಪನೆ ಖಂಡಿಸುವ ಕುರಿತು ವಿಶ್ವಸಂಸ್ಥೆ ನಿರ್ಣಯ ಮಂಡಿಸಿತ್ತು. ಭಾರತ ಸೇರಿ 145 ದೇಶಗಳು ನಿರ್ಣಯದ ಪರ ಮತ ಚಲಾವಣೆ ಮಾಡಿದವು. ಅಮೇರಿಕಾ ಕೆನಡಾ ಇಸ್ರೇಲ್‌ ಸೇರಿ 7 ದೇಶಗಳು ವಿರದ್ಧ ಮತ ಹಾಕಿದರೇ, 18 ರಾಷ್ಟ್ರಗಳು ತಟಸ್ಥ ಕಾಯ್ದುಕೊಂಡವು.

ಗಾಜಾ ಪಟ್ಟಿಯಲ್ಲಿ ತಕ್ಷಣ ದೀರ್ಘಕಾಲಿನ ಮಾನವೀಯ ವಿರಾಮ ಘೋಷಣೆ ಮಾಡಬೇಕು ಎಂದು ವಿಶ್ವಸಂಸ್ಥೆ ನಿರ್ಣಯ ಮಂಡಿಸಿತ್ತು. ಇದು ಯುದ್ದ ನಿಲ್ಲಿಸುವ ಪರ ಇದ್ದರಿಂದ ಭಾಋತ ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿತ್ತು. ಈಗ ಪ್ಯಾಲೆಸ್ತೀನ ಭೂಭಾಗದಲ್ಲಿ ವಸಹತು ಸ್ಥಾಪನೆ ಖಂಡನೆ ನಿರ್ಣಯ ಪರ ಮತ ಚಲಾಯಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಪ್ಯಾಲೆಸ್ತೀನ್ ಭೂಭಾಗದಲ್ಲಿ ಜಾಗ ಕಸಿಯುವುದು, ಸಂರಕ್ಷಿತ ಜನರ ಜೀವನೋಪಾಯಗಳನ್ನು ಅಸ್ತವ್ಯಸ್ತಗೊಳಿಸುವುದು, ಬಲವಂತವಾಗಿ ನಾಗರೀಕರನ್ನು ಸ್ಥಳಾಂತರಿಸುವುದು, ಜಾಗವನ್ನು ಕಬಳಿಸುವುದನ್ನು ಖಂಡಿಸುವ ಅಂಶಗಳು ಈ ನಿರ್ಣಯದಲ್ಲಿದೆ.

ಇಸ್ರೇಲ್‌ ಹಾಗೂ ಹಮಾಸ್‌ ನಡುವಿನ ಯುದ್ಧದಿಂದಾಗಿ ಗಾಜಾ ಪಟ್ಟಿನಲ್ಲಿ ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ಹಾಗಾಗಿ, ಮಾನವೀಯ ನೆಲೆಯಲ್ಲಿ ಕದನ ವಿರಾಮ ಘೋಷಿಸಬೇಕು ಎಂಬುದು ವಿಶ್ವಸಂಸ್ಥೆಯ ಒತ್ತಾಯವಾಗಿದೆ. ವಿಶ್ವದ ಹಲವು ರಾಷ್ಟ್ರಗಳು ಹಾಗೂ ಮಾನವ ಹಕ್ಕು ಸಂಘಟನೆಗಳ ಆಗ್ರಹವಾಗಿದೆ.

ನವದೆಹಲಿ : ಪ್ಯಾಲೆಸ್ತೀನ್‌ ನಲ್ಲಿ ಇಸ್ಸ್ರೇಲ್‌ ವಾಸನೆಲೆಗಳನ್ನು ಸ್ಥಾಪಿಸಿರುವುದು ಅಕ್ರಮ ಎಂದು ಸಾರುವ ನಿರ್ಣಯವನ್ನು ಬೆಂಬಲಿಸಿ ಭಾರತ ಮತ ಹಾಕಿರುವ ಕುರಿತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಅಕ್ರಮಿತ ಪ್ಯಾಲೆಸ್ತೀನ್‌ ಭೂಭಾಗ ಹಾಗೂ ಸಿರಿಯನ್‌ ಗೋಲನ್‌ನಲ್ಲಿ ಇಸ್ರೇಲ್‌ ವಸಾಹತು ಸ್ಥಾಪನೆ ಖಂಡಿಸುವ ಕುರಿತು ವಿಶ್ವಸಂಸ್ಥೆ ನಿರ್ಣಯ ಮಂಡಿಸಿತ್ತು. ಭಾರತ ಸೇರಿ 145 ದೇಶಗಳು ನಿರ್ಣಯದ ಪರ ಮತ ಚಲಾವಣೆ ಮಾಡಿದವು. ಅಮೇರಿಕಾ ಕೆನಡಾ ಇಸ್ರೇಲ್‌ ಸೇರಿ 7 ದೇಶಗಳು ವಿರದ್ಧ ಮತ ಹಾಕಿದರೇ, 18 ರಾಷ್ಟ್ರಗಳು ತಟಸ್ಥ ಕಾಯ್ದುಕೊಂಡವು.

ಗಾಜಾ ಪಟ್ಟಿಯಲ್ಲಿ ತಕ್ಷಣ ದೀರ್ಘಕಾಲಿನ ಮಾನವೀಯ ವಿರಾಮ ಘೋಷಣೆ ಮಾಡಬೇಕು ಎಂದು ವಿಶ್ವಸಂಸ್ಥೆ ನಿರ್ಣಯ ಮಂಡಿಸಿತ್ತು. ಇದು ಯುದ್ದ ನಿಲ್ಲಿಸುವ ಪರ ಇದ್ದರಿಂದ ಭಾಋತ ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿತ್ತು. ಈಗ ಪ್ಯಾಲೆಸ್ತೀನ ಭೂಭಾಗದಲ್ಲಿ ವಸಹತು ಸ್ಥಾಪನೆ ಖಂಡನೆ ನಿರ್ಣಯ ಪರ ಮತ ಚಲಾಯಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಪ್ಯಾಲೆಸ್ತೀನ್ ಭೂಭಾಗದಲ್ಲಿ ಜಾಗ ಕಸಿಯುವುದು, ಸಂರಕ್ಷಿತ ಜನರ ಜೀವನೋಪಾಯಗಳನ್ನು ಅಸ್ತವ್ಯಸ್ತಗೊಳಿಸುವುದು, ಬಲವಂತವಾಗಿ ನಾಗರೀಕರನ್ನು ಸ್ಥಳಾಂತರಿಸುವುದು, ಜಾಗವನ್ನು ಕಬಳಿಸುವುದನ್ನು ಖಂಡಿಸುವ ಅಂಶಗಳು ಈ ನಿರ್ಣಯದಲ್ಲಿದೆ.

ಇಸ್ರೇಲ್‌ ಹಾಗೂ ಹಮಾಸ್‌ ನಡುವಿನ ಯುದ್ಧದಿಂದಾಗಿ ಗಾಜಾ ಪಟ್ಟಿನಲ್ಲಿ ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ಹಾಗಾಗಿ, ಮಾನವೀಯ ನೆಲೆಯಲ್ಲಿ ಕದನ ವಿರಾಮ ಘೋಷಿಸಬೇಕು ಎಂಬುದು ವಿಶ್ವಸಂಸ್ಥೆಯ ಒತ್ತಾಯವಾಗಿದೆ. ವಿಶ್ವದ ಹಲವು ರಾಷ್ಟ್ರಗಳು ಹಾಗೂ ಮಾನವ ಹಕ್ಕು ಸಂಘಟನೆಗಳ ಆಗ್ರಹವಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ