ತಮಿಳುನಾಡು: ಕರ್ನಾಟಕದ ಸಿಂಗಂ ಅಣ್ಣಾಮಲೈ ಅವರು ಪೊಲೀಸ್ ಹುದ್ದೆ ತೊರೆದು ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದರು. ಇನ್ನು ಈವರೆಗೆ ತಮಿಳುನಾಡಿನಲ್ಲಿ ಅರಳದ ಕಮಲವನ್ನು ಮೊದಲ ಬಾರಿಗೆ ಅರಳಿಸುವ ಪ್ರಯತ್ನಕ್ಕೆ ಮುನ್ನುಗ್ಗಿದ್ದ ಅಣ್ಣಾಮಲೈಗೆ ಮತದಾರ ಕೈ ಕೊಟ್ಟಿದ್ದಾನೆ.
ದಕ್ಷಿಣ ಭಾರತದಲ್ಲಿ ಬಿಜೆಪಿ ತನ್ನ ಅಧಿಕಾರ ಸ್ಥಾಪಿಸುವ ಕುರಿತು ಚಿಂತನೆ ನಡೆಸಿತ್ತು. ಅದರಲ್ಲಿಯೂ ಮುಖ್ಯವಾಗಿ ತಮಿಳುನಾಡಿನಲ್ಲಿ ಕಮಲ ಅರಳಿಸುವ ಕುರಿತು ಹಲವು ಸಾಹಸಗಳನ್ನು ಮಾಡಿತ್ತು.
ಅಣ್ಣಾಮಲೈ ಅವರು ಪ್ರಧಾನಿಯನ್ನು ಹಲವು ಬಾರಿ ತಮಿಳುನಾಡಿಗೆ ಕರೆ ತಂದರೂ ಸಹ ಇಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಯಾವುದೇ ಒಂದು ಸೀಟನ್ನು ಗೆಲ್ಲದ ಬಿಜೆಪಿಗೆ ಭಾರೀ ಮುಖಭಂಗವಾಗಿದೆ.
ಇಲ್ಲಿನ ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಅಣ್ಣಾಮಲೈಗೆ ಹಿನ್ನಡೆ ಉಂಟಾಗಿದೆ. ಗಣಪತಿ ರಾಜ್ ಕುಮಾರ್ ವಿರುದ್ಧ 30 ಸಾವಿರ ಅಂತರಗಳ ಹಿನ್ನಡೆ ಅನುಭವಿಸುವ ಮೂಲಕ ಸೋಲಿಗೆ ಶರಣಾಗಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆಯೊಂದೆ ಬಾಕಿಯಿದೆ.
ಮದ್ಯಾಹ್ನ 3 ಗಂಟೆ ವೇಳೆಗೆ ಡಿಎಂಕೆ ಪಕ್ಷದ ಗಣಪತಿ ರಾಜ್ಕುಮಾರ್ 158051 ಮತ ಪಡೆದು ಮುನ್ನಡೆ ಸಾಧಿಸಿದರೆ, 127315 ಮತ ಪಡೆದಿರುವ ಬಿಜೆಪಿಯ ಅಣ್ಣಾಮಲೈ ಹಿನ್ನಡೆ ಅನುಭವಿಸಿದ್ದಾರೆ. ಈ ಇಬ್ಬರ ನಡುವಿನ ಅಂತರ 30736 ಮತಗಳಾಗಿವೆ.