ಬೆಂಗಳೂರು : ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಪುನೀತ ಪರ್ವ ಕಾರ್ಯಕ್ರಮ ನಡೆಯಲಿದ್ದು ಪುನೀತ್ ಮನೆ ಮುಂದೆ ಇರುವ ಗಣಪತಿಗೆ ಪ್ರತಿ ದಿನ ಪೂಜೆ ಮಾಡಲಾಗುತ್ತದೆ. ಪುನೀತ ಪರ್ವ ಕಾರ್ಯಕ್ರಮ ಕ್ಕೆ ಗಣೇಶನ ಆಶೀರ್ವಾದ ಸಿಕ್ಕಿದ್ದು ಯಾವುದೇ ವಿಘ್ನ ಆಗದಂತೆ ಪುನೀತ್ ಮನೆ ಬಳಿ ಇರುವ ಗಣೇಶನ ಬಲಭಾಗದಿಂದ ಹೂವಿನ ಪ್ರಸಾದ ಬಿದ್ದಿರುವುದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ. ಶುಕ್ರವಾರ ಬೆಳಗ್ಗೆ ಬಂದು ಪುರೋಹಿತರು ಪೂಜೆ ಮಾಡಿಕೊಂಡು ಹೋಗಿದ್ದರು. ಗಣಪತಿಗೆ ಪೂಜೆ ಹೂವಿನ ಹಾರ ಹಾಕಿದ್ದು ಬಲಗಡೆಯಿಂದ ಹೂ ಕೆಳಗೆ ಬಿದ್ದಿದ್ದು ದೇವರ ಆಶಿರ್ವಾದ ಎಂದೇ ಅಭಿಮಾನಿಗಳು ಸಂಭ್ರಮಿಸಿದ್ದಾರೆ.





