ಕರ್ಣಾಟಕ ಮೂಲದ ಸಾಗರ ಸಾಹಸಿ ಅನನ್ಯಾ ಪ್ರಸಾದ್ ನನ್ನ ವಿದ್ಯಾ ಗುರು ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪನವರ ಮೊಮ್ಮಗಳು. ಅಂದಹಾಗೆ, ಜಿಎಸ್ಎಸ್ ಅವರ ಈ ಕವನ ಪ್ರಸಿದ್ಧವಾದದ್ದು: ಕಾಣದ ಕಡಲಿಗೆ ಹಂಬಲಿಸಿದೆ ಮನ, ಕಾಣಬಲ್ಲೆನೆ ಕಡಲ ಒಂದು ದಿನ..!
ಸ್ವಾರಸ್ಯವೆಂದರೆ, ನನ್ನದೂ ಒಂದು ‘ಕಡಲ ಕವನ’ ಇದೆ (ಅಷ್ಟೇನೂ ಪ್ರಸಿದ್ಧವಲ್ಲದ್ದು; ಗಾಯಕಿ ಸ್ನೇಹಶ್ರೀ ಅವರ ಕಂಠದಲ್ಲಿ ಕೇಳಬೇಕಾದದ್ದು): ಹತ್ತಿರ ಹತ್ತಿರವಾಗುತ್ತಿದೆ ಕಡಲು, ಕಗ್ಗತ್ತಲ ಒಡಲು..! ಎರಡೂ ಅರ್ಥಪೂರ್ಣ!
-ಸಿಪಿಕೆ, ಮೈಸೂರು