Mysore
23
overcast clouds

Social Media

ಬುಧವಾರ, 22 ಏಪ್ರಿಲ 2026
Light
Dark

ಓದುಗರ ಪತ್ರ: ಅಮಾನವೀಯ ಕೃತ್ಯ

ಓದುಗರ ಪತ್ರ

ಹಕ್ಕಿಪಿಕ್ಕಿ ಜನಾಂಗದ,ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬನನ್ನು ಅರೆ ಬೆತ್ತಲೆ ಮಾಡಿ ಅಡಕೆ ಮರಕ್ಕೆ ಕಟ್ಟಿ ದೇಹದ ಮೇಲೆ ಕೆಂಪು ಇರುವೆ ಹತ್ತಿಸಿ ಚಿತ್ರ ಹಿಂಸೆ ಕೊಟ್ಟಿರುವ ಪ್ರಕರಣ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಅಪ್ತಾಫನಹಳ್ಳಿಯಲ್ಲಿ ನಡೆದಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಈ ಬಾಲಕ ಊರಿನಲ್ಲಿ ಕಳ್ಳತನ ಮಾಡುತ್ತಿದ್ದ ಎಂದು ಆರೋಪಿಸಿ ಆತನಿಗೆ ಅದೇ ಗ್ರಾಮದ ಕೆಲವು ವಿಕೃತ ಮನಸ್ಸಿನ ಯುವಕರು ಈ ರೀತಿ ಚಿತ್ರ ಹಿಂಸೆ ನೀಡಿದ್ದಾರೆ ಎನ್ನಲಾಗಿದೆ. ಬಾಲಕ ಕಳ್ಳತನ ಮಾಡಿದ್ದರೆ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಬಹುದಿತ್ತು, ಆದರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.

ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು

Tags:
error: Content is protected !!