ಸಾರ್ಥಕ ಬದುಕಿನ ಸಾಧಕ!
ಗಹನ ಆರ್ಥಿಕ ಚಿಂತನೆಗಳನು
ಎಳೆಎಳೆಯಾಗಿ ಬಿಡಿಸಿ ನೀಡಿದ
ನಾಡ ಅಪ್ಪಟ ಆರ್ಥಿಕ ಚಿಂತಕ!
ಶಿಷ್ಯರ ಮನದ ಚಿಂತೆ ಸಮಸ್ಯೆಗಳ
ದೂರಸರಿಸಿ ಬಿತ್ತಿದಿರಿ ಎದೆಯಂಗಳದಲಿ
ಹೊಸ ಚಿಂತನೆಯ ಬಿತ್ತವ!
ಜನರ ಮಧ್ಯ ಬಾಳಿ ಬದುಕಿದ
ನಾಡ ನಾಡಿಮಿಡಿತ ಅರಿತ
ಸಾರ್ಥಕ ಬದುಕಿನ ಸಾಧಕ
ನಿಜದ ನೆಲೆಯ ಚಿಂತಾಮಣಿ !
ಪಯಣ ಮುಗಿಸಿ ಹೊರಟಿರಿ ದೂರದೂರಿಗೆ
ನಿಮಗಿದೋ ಪ್ರೀತಿಯ ನುಡಿನಮನ!
-ಸಿ.ಪಿ.ಸಿದ್ಧಾಶ್ರಮ, ಮೈಸೂರು




