Mysore
29
broken clouds

Social Media

ಸೋಮವಾರ, 22 ಜೂನ್ 2026
Light
Dark

ಪಿರಿಯಾಪಟ್ಟಣ | ವಿಶೇಷಚೇತನರಿಗೆ ವಿತರಣೆಯಾಗದ ಸಾಧನಗಳು

ಫಲಾನುಭವಿಗಳಿಗೆ ವಿತರಿಸಲು ಶಾಸಕರ ದಿನಾಂಕ ಸಿಗದೆ ಕೊಠಡಿಯಲ್ಲಿ ತುಂಬಿ ಬೀಗ ಹಾಕಿದ ಅಧಿಕಾರಿಗಳು

ಪಿರಿಯಾಪಟ್ಟಣ : ಕೇಂದ್ರ ಸರ್ಕಾರದ ಅಲಿಂಕೋ ಸಂಸ್ಥೆ ಭಾರತೀಯ ಕೃತಕ ಅಂಗಾಂಗಗಳ ಉತ್ಪಾದನಾ ನಿಗಮದ ವತಿಯಿಂದ ಈ ಹಿಂದೆ ಪಿರಿಯಾಪಟ್ಟಣದಲ್ಲಿ ವಿಕಲಚೇತನರ ತಪಾಸಣಾ ಶಿಬಿರ ನಡೆಸಿ ಅದರಲ್ಲಿ ಆಯ್ಕೆಯಾದ ತಾಲ್ಲೂಕಿನ ೧೫೦ ಮಂದಿ ವಿಕಲಚೇತನರಿಗೆ ನೀಡಲು ತರಿಸಿದ್ದ ವ್ಹೀಲ್ ಚೇರ್, ಟ್ರೈಸೈಕಲ್, ಬ್ಯಾಟರಿ ಚಾಲಿತ ವಾಹನ, ವಾಕರ್, ಸ್ಟಿಕ್‌ಗಳು, ಶ್ರವಣ ಸಾಧನಗಳು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಉಪಕರಣಗಳು ೬ ತಿಂಗಳಿಂದ ತುಕ್ಕು ಹಿಡಿಯು ತ್ತಿರುವ ಅಂಶ ಬೆಳಕಿಗೆ ಬಂದಿದೆ.

ಆಯ್ಕೆಯಾದ ವಿಕಲಚೇತನರಿಗೆ ನವೆಂಬರ್ ತಿಂಗಳಿನಲ್ಲಿ ಸಾಧನ ಸಲಕರಣೆಗಳನ್ನು ವಿತರಿಸ ಬೇಕಿತ್ತು. ಈ ಸಾಧನ-ಸಲಕರಣೆಗಳನ್ನು ಪಿರಿಯಾ ಪಟ್ಟಣದ ಎಸ್‌ಕೆಎಸ್‌ಟಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಕಂಪ್ಯೂಟರ್ ಕೊಠಡಿಗಳಲ್ಲಿ ತುಂಬಲಾಗಿತ್ತು. ಹೀಗೆ ತುಂಬಿಟ್ಟ ಉಪಕರಣಗಳು ಆರು ತಿಂಗಳಾದರೂ ವಿತರಣೆಯಾಗದೆ ತುಕ್ಕು ಹಿಡಿಯುವ ಹಂತ ತಲುಪಿವೆ.

ಸಾಧನ ಸಲಕರಣೆಗಳಿಗೆ ಕೊಠಡಿಯ ಸ್ಥಳಾವಕಾಶ ಮಾಡಿಕೊಟ್ಟ ಶಾಲೆಯ ಮುಖ್ಯಸ್ಥರು ಈಗ ತೊಂದರೆಗೆ ಒಳಗಾಗಿದ್ದಾರೆ. ಆರು ತಿಂಗಳಿಂದ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಬೋಽಸಲು ಕೊಠಡಿಯಿಲ್ಲದೆ ಅಡ್ಡಿಯಾಗಿದೆ. ಶೀಘ್ರದಲ್ಲೇ ಇದನ್ನು ಖಾಲಿ ಮಾಡಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಗಮನಕ್ಕೆ ತರಲಾಗಿದೆ. ಆದರೂ ಸಲಕರಣೆಗಳ ವಿತರಣೆಯಾಗಿಲ್ಲ.

ವಿಕಲಚೇತನರಿಗೆ ಸೂಕ್ತ ಸಂದರ್ಭದಲ್ಲಿ ಸಾಧನ ಉಪಕರಣಗಳನ್ನು ವಿತರಿಸದೇ ಇರುವುದರಿಂದ ಇವು ತುಕ್ಕು ಹಿಡಿಯುತ್ತಿವೆ. ಬ್ಯಾಟರಿಗಳು ಹಾಳಾಗುತ್ತಿವೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸಲಕರಣೆಗಳ ವಿತರಣೆ ಮಾಡಲು ಶಾಸಕ ಕೆ. ವೆಂಕಟೇಶ್ ಅವರ ದಿನಾಂಕ ಸಿಗುತ್ತಿಲ್ಲ. ಆದ್ದರಿಂದ ವಿತರಣೆ ಸಾಧ್ಯವಾಗಿಲ್ಲ ಎನ್ನುತ್ತಾರೆ. ಪ್ರತಿವಾರ ತಾಲ್ಲೂಕಿಗೆ ಬಂದು ಹೋಗುವ ಶಾಸಕ ಕೆ.ವೆಂಕಟೇಶ್ ವಿಕಲಚೇತನರಿಗೆ ಸಾಧನ ಸಲಕರಣೆ ವಿತರಿಸಲು ದಿನಾಂಕ ನೀಡದಿರುವುದು ವಿಪರ್ಯಾಸವೇ ಸರಿ.

ಈ ನಡುವೆ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ, ಡಿಸಿಎಂ ಆಗಿದ್ದ ಡಿ. ಕೆ. ಶಿವಕುಮಾರ್ ಮತ್ತಿತರರು ತಾಲ್ಲೂಕಿಗೆ ಕುವೆಂಪು ಭವನ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಈ ಸಾಧನ ಸಲಕರಣೆಗಳನ್ನು ವಿತರಣೆ ಮಾಡಬಹುದಿತ್ತು. ಆದರೆ ವಿಕಲಚೇತನರಿಗೆ ಬಂದಿ ರುವ ಸಾಧನ ಸಲಕರಣೆಗಳನ್ನು ವಿತರಣೆ ಮಾಡದೆ ಹೀಗೆ ನಿರ್ಲಕ್ಷ್ಯ ಮಾಡಿ ವಿಕಲಚೇತನ ರಿಗೆ ಸಿಗಬೇಕಾದ ಸೌಲಭ್ಯವನ್ನು ವಂಚನೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈಗಾ ಗಲೇ ಪಟ್ಟಿ ಸಿದ್ಧವಿದ್ದು ವಿಕಲ ಚೇತನ ಫಲಾನುಭವಿಗಳ ಸಂಪೂರ್ಣ ವಿವರ ಇದ್ದರೂ ಅಧಿಕಾರಿಗಳು, ರಾಜಕಾರಣಿಗಳು ವಿತರಣೆ ಮಾಡದೆ ಇರುವುದು ವಿಕಲಚೇತನರು ಮಾತ್ರವಲ್ಲ, ಸಾರ್ವಜನಿಕರಲ್ಲಿಯೂ ಅಸಮಾಧಾನ ಮೂಡಿಸಿದೆ. ತಲಾ ೧೮ ಲಕ್ಷ ರೂ. ಮೌಲ್ಯದ ಸಾಧನೆ ಸಲಕರಣೆಗಳು ಇದಾಗಿದ್ದು, ಶಾಸಕರು ವಿತರಣೆ ಮಾಡಲು ದಿನಾಂಕ ಕೊಡುತ್ತಿಲ್ಲ. ಸಂಸದರು ೪ ಬಾರಿ ದಿನಾಂಕ ನೀಡಿದ್ದರೂ ಶಾಸಕ ಕೆ. ವೆಂಕಟೇಶ್ ದಿನಾಂಕ ನೀಡಿಲ್ಲ. ನಾವೇ ವಿತರಣೆ ಮಾಡುತ್ತೇವೆ ಎಂದರೆ ಅಧಿಕಾರಿಗಳಿಗೆ ಹಕ್ಕುಚ್ಯುತಿ ಮಂಡಿಸುವ ಬೆದರಿಕೆ ಹಾಕುತ್ತಿದ್ದಾರೆ. ಇದಲ್ಲದೆ ಇಲಾಖೆಯ ಅಂದು ಸಚಿವರಾಗಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಮಹಿಳಾ ದಿನಾಚರಣೆಗೆ ಕರೆಸಿದ್ದ ಸಂದರ್ಭದಲ್ಲೂ ವಿತರಿಸಬಹುದಿತ್ತು. ಅದೂ ಮಾಡಲಿಲ್ಲ. ಒಟ್ಟಿನಲ್ಲಿ ವಿಕಲಚೇತನರ ದಿನನಿತ್ಯದ ಬದುಕಿಗೆ ಆಸರೆ ಯಾಗಬೇಕಿದ್ದ ಉಪಕರಣಗಳು ವಿತರಣೆಯಾಗದೆ ತುಕ್ಕುಹಿಡಿಯುತ್ತಿವೆ ಎನ್ನುತ್ತಾರೆ ಕೆಲ ಅಧಿಕಾರಿಗಳು.

Tags:
error: Content is protected !!