Mysore
26
broken clouds

Social Media

ಬುಧವಾರ, 26 ಆಗಸ್ಟ್ 2026
Light
Dark

ಹಲಗೂರು | ವಿದ್ಯುತ್‌ ಸ್ಪರ್ಶಕ್ಕೆ ಗಂಡಾನೆ ಸಾವು

elephant dies due to electric shock.

ಮಳವಳ್ಳಿ : ಜಮೀನಿಗೆ ಅಳವಡಿಸಿದ್ದ ವಿದ್ಯುತ್‌ ಬೇಲಿಯ ಸ್ಪರ್ಶಕ್ಕೆ ಮುತ್ತತ್ತಿ ಅರಣ್ಯ ಪ್ರದೇಶ ಗಂಡಾನೆ ಸಾವಿಗೀಡಾಗಿರುವ ಘಟನರ ತಾಲೂಕಿನ ಹಲಗೂರು ಸಮೀಪದ ಕರಲಕಟ್ಟೆ ಗ್ರಾಮದ ಬಳಿ ನಡೆದಿದೆ. ಗ್ರಾಮದ ಮುಳ್ಳಯ್ಯನ ಕಟ್ಟೇಯ ಬಳಿ ಇರುವ ಎಚ್.ಸಿ.ರಮೇಶ್ ರೆಡ್ಡಿ ಅವರ ಜಮೀನಿನಲ್ಲಿ ಅಳವಡಿಸಿದ್ದ ವಿದ್ಯುತ್ ಬೇಲಿಗೆ ಭಾನುವಾರ ತಡರಾತ್ರಿ ಮುತ್ತತ್ತಿ ಅರಣ್ಯ ಪ್ರದೇಶದಿಂದ ಸುಮಾರು 35 ರಿಂದ 40 ವರ್ಷದ ಗಂಡಾನೆ ಆಹಾರ ಆರಿಸಿಕೊಂಡ ಬಂದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶವಾಗಿ ಸ್ಥಳದಲ್ಲೇ ಮೃತಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಹಿರಿಯ ಅರಣ್ಯ ಅಧಿಕಾರಿಗಳು, ವಿದ್ಯುತ್ ಇಲಾಖೆ ಹಾಗೂ ಹಲಗೂರು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಸೀಲನೆ ನಡಸಿದ್ದಾರೆ.

Tags:
error: Content is protected !!