Mysore
35
scattered clouds

Social Media

ಮಂಗಳವಾರ, 28 ಏಪ್ರಿಲ 2026
Light
Dark

ಶ್ರೀರಂಗನಾಥ ದೇವಸ್ಥಾನದಲ್ಲಿ ಹುಂಡಿ ಏಣಿಕೆ: 37.33 ಲಕ್ಷ ರೂ. ಸಂಗ್ರಹ

Hundi counting at Sri Ranganatha Temple: Rs 37.33 lakh collected

ಶ್ರೀರಂಗಪಟ್ಟಣ: ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಸ್ಥಾನದಲ್ಲಿ ೩ ತಿಂಗಳನಂತರ ೧೧ ಹುಂಡಿಗಳನ್ನು ಬಿಚ್ಚಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸೋಮಶೇಖರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಎಂ.ಉಮಾ ಅವರ ಸಮ್ಮುಖದಲ್ಲಿ ಎಣಿಕೆ ಮಾಡಲಾಯಿತು.

ಹುಂಡಿಗಳಲ್ಲಿ ಭಾರತದ ರೂಪಾಯಿಗಳಲ್ಲದೆ, ಅಮೇರಿಕಾ, ಕೆನಡಾ, ಇಂಡೋನೇಷಿಯಾ, ಮಲೇಷಿಯಾ, ಯುರೋಪ್ ವಿದೇಶಿಯ ಹಣವೂ ಬಂದಿದ್ದು, ಕಾವೇರಿ ಗ್ರಾಮೀಣ ಬ್ಯಾಂಕ್ ಮೇನೇಜರ್ ಹರ್ಷ ಮತ್ತು ೬೫ ಜನ ಸಿಬ್ಬಂದಿ ಎಣಿಕೆ ಮಾಡಿ ಬ್ಯಾಂಕ್ ಖಾತೆಗೆ ಹಾಕಲಾಯಿತು.

Tags:
error: Content is protected !!