Mysore
20
few clouds

Social Media

ಗುರುವಾರ, 20 ಆಗಸ್ಟ್ 2026
Light
Dark

ಈ ಬಾರಿಯ ದಸರಾ ಹೊಸ ಸಿಎಂರಿಂದ ಉದ್ಘಾಟನೆ: ಪ್ರತಿಪಕ್ಷ ನಾಯಕ ಆರ್.‌ಅಶೋಕ್‌

ಮೈಸೂರು: ರಾಜ್ಯದಲ್ಲಿ ಸಿಎಂ ಬದಲಾಗೋದು ಖಚಿತವಾಗಿದ್ದು, ಈ ಬಾರಿಯ ದಸರಾ ಹೊಸ ಸಿಎಂರಿಂದ ಉದ್ಘಾಟನೆಯಾಗಲಿದೆ ಎಂದು ಪ್ರತಿಪಕ್ಷ ನಾಯಕ ಆರ್.‌ಅಶೋಕ್‌ ಹೇಳಿದ್ದಾರೆ.

ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್‌ನಲ್ಲಿ ಸಿಎಂ ಬದಲಾವಣೆ ಖಚಿತ. ಸಿಎಂ ಕುರ್ಚಿಯ ಬಗ್ಗೆ ಅಗ್ರಿಮೆಂಟ್ ಆಗಿರೋದು ಖಚಿತ. ಅದಕ್ಕಾಗಿ ಕುರ್ಚಿ ಉಳಿಸಿಕೊಳ್ಳಲು ಇದೆಲ್ಲ ಟ್ರಯಲ್ ನಡೆಯುತ್ತಿದೆ. ಒಟ್ಟಾರೆ ಕಾಂಗ್ರೆಸ್ ಒಡೆದ ಮನೆಯಾಗಿದೆ. ಚೇರ್ ಉಳಿಸಿಕೊಳ್ಳಲು ಸಿಎಂ ಆ ರೀತಿ ಮಾತನಾಡುತ್ತಿದ್ದಾರೆ. ಈ ಬಾರಿ ಹೊಸ ಸಿಎಂ ದಸರಾ ಮಾಡುತ್ತಾರೆ ಎಂದು ಸ್ಫೋಟಕ ಹೇಳಿಕೆ ನೀಡಿದರು.

ಇನ್ನು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಸಂವಿಧಾನದ ಬಗ್ಗೆ ಗೌರವ ಇದ್ದರೆ ತುರ್ತು ಪರಿಸ್ಥಿತಿಯ ಪರವೋ ಅಥವಾ ವಿರೋಧವೂ ಎಂಬುದನ್ನು ತಿಳಿಸಲಿ. ತುರ್ತು ಪರಿಸ್ಥಿತಿಯಲ್ಲಿ ಅಮಾಯಕ ದೇಶ ಪ್ರೇಮಿಗಳು ಸತ್ತಿದ್ದೇಕೆ? ಲಾಟಿ ಚಾರ್ಜ್ ಮಾಡಿದ್ದೇಕೆ ಎಂಬುದಕ್ಕೆ ಕಾಂಗ್ರೆಸ್ ಉತ್ತರವನ್ನೇ ಕೊಟ್ಟಿಲ್ಲ. ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿಕೊಳ್ಳಲು ಆಗಿಲ್ಲ. ಈ ವಿಚಾರ ಮುಚ್ಚಿಡುವ ಮೂಲಕ ಕಳ್ಳಾಟ ಮಾಡುತ್ತಿದೆ. ಆ ವೇಳೆ ನಾನು ಕೂಡ ಬಂಧನವಾಗಿದ್ದೆ. ನಾನು ಕಾಲೇಜ್ ಸ್ಟೂಡೆಂಟ್ ಆಗಿದ್ದೆ ನನ್ನನ್ನೇಕೆ ಅರೆಸ್ಟ್ ಮಾಡಿದ್ದರು ಎಂಬುದನ್ನು ಹೇಳಿರಿ. ಅಘೋಷಿತ ತುರ್ತು ಎಂದರೆ ನಾವೇನು ಚುನಾವಣೆಗೆ ನಿಲ್ಲಬೇಡ ಎಂದು ತಡೆದಿದ್ದೇವಾ. ಬೇರೆ ಬೇರೆ ದೇಶಕ್ಕೆ ಹೋಗಿ ಭಾರತದ ಬಗ್ಗೆ ಮಾತನಾಡುತ್ತೀರಿ. ನಿಮ್ಮನ್ನು ಮೋದಿ ತಡೆದಿದ್ದಾರಾ.? ಅಂದು ಪತ್ರಿಕೆಯ ಕಂಟೆಂಟ್ ಬಗ್ಗೆ ಇಂದಿರಾಗಾಂಧಿ ತೀರ್ಮಾನ ಮಾಡ್ತಿದ್ರು. ಆದರೆ ಇಂದು ಮೋದಿ ಆ ರೀತಿ ನಡೆದುಕೊಳ್ಳುತ್ತಿದ್ದಾರಾ? ಎಂದು ಕಾಂಗ್ರೆಸ್‌ ನಾಯಕರಿಗೆ ಪ್ರಶ್ನೆ ಮಾಡಿದರು.

Tags:
error: Content is protected !!