ಹಣ ವಸೂಲಿ ಮಾಡಲು ಕ್ರೈಂ ಬ್ರಾಂಚ್ ಪೊಲೀಸ್ ಎಂದು ಹೇಳಿಕೊಂಡವ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ವ್ಯಕ್ತಿಯೋರ್ವರು ಅನುಮಾನ ವ್ಯಕ್ತಪಡಿಸಿ ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.
ಮೈಸೂರು ಜಿಲ್ಲೆಯ ಕೆಆರ್ ನಗರ ತಾಲೂಕಿನ ಮಧುವನಹಳ್ಳಿ ನಿವಾಸಿ ದಿವ್ಯರಾಜ್ ಬಂಧಿತ ಆರೋಪಿಯಾಗಿದ್ದು, ಈತ ಈಗಾಗಲೇ ಹಲವರ ಬಳಿ ತಾನು ಕ್ರೈಂ ಬ್ರಾಂಚ್ ಪೊಲೀಸ್ ಎಂದು ನಂಬಿಸಿ ಹಣ ಪಡೆದಿದ್ದು, ಕೊಪ್ಪ ಗ್ರಾಮದ ಆಯುರ್ವೇದಿಕ್ ಸ್ಪಾ ಮಾಲೀಕ ಪುಷ್ಪ ಕುಮಾರ್ ಅವರು ಈತನ ಮಾತನ್ನು ನಂಬದೇ ಪೊಲೀಸ್ ದೂರು ನೀಡಿದ್ದರು. ಸದ್ಯ ದಿವ್ಯರಾಜ್ ಅನ್ನು ಬೈಲುಕುಪ್ಪೆ ಪೊಲೀಸರು ಬಂಧಿಸಿದ್ದಾರೆ.