ಬೆಂಗಳೂರು: ವಿಧಾನಸೌಧದಲ್ಲಿಯೇ ಟೆರರಿಸ್ಟ್ಗಳಿದ್ದಾರೆ. ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಟೆರರಿಸ್ಟ್ಗಳಿಗಿಂತಲೂ ಡೇಂಜರ್ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ವಿಧಾನಸೌಧದಲ್ಲಿಯೇ ಟೆರರಿಸ್ಟ್ಗಳಿದ್ದಾರೆ. ಆ ಟೆರರಿಸ್ಟ್ ಯಾರೆಂದು ನಮಗಿಂತ ಚೆನ್ನಾಗಿ ನಿಮಗೆಲ್ಲಾ ಗೊತ್ತು. ಜನರಿಗೂ ಕೂಡ ಗೊತ್ತು. ನಾವು ಜೈಲಿನಲ್ಲಿರುವ ಟೆರರಿಸ್ಟ್ಗಳ ಬಗ್ಗೆ ಮಾತನಾಡುತ್ತಿದ್ದೇವೆ. ಅಧೀಕಾರಿಗಳ ನಡುವೆಯೇ ರಾಜಕಾರಣ ನಡೆಯುತ್ತಿದೆ ಎಂದು ಹೇಳಿದರು.
ವಿಧಾನಸೌಧದಲ್ಲಿರುವ ಟೆರರಿಸ್ಟ್ಗಳು ಜೈಲಿನಲ್ಲಿರುವ ಟೆರರಿಸ್ಟ್ಳಿಗಿಂತಲೂ ಅಪಾಯಕಾರಿ ಎಂದು ಹೇಳಿದರು.





