Mysore
22
overcast clouds

Social Media

ಶುಕ್ರವಾರ, 31 ಜುಲೈ 2026
Light
Dark

ತುಂಗಾ ನದಿ ಸೇತುವೆ ಮೇಲೆ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು: ತಪ್ಪಿದ ಭಾರೀ ಅನಾಹುತ

train

ಶಿವಮೊಗ್ಗ: ತಾಳಗುಪ್ಪ-ಮೈಸೂರು ರೈಲುವೊಂದರ ಬೋಗಿಗಳ ನಡುವಿನ ಲಿಂಕ್‌ ಕಟ್ಟಾಗಿ ರೈಲಿನ ಬೋಗಿಗಳು ಬೇರ್ಪಟ್ಟ ಘಟನೆ ಶಿವಮೊಗ್ಗದ ಹಳೆ ಬಸ್‌ ನಿಲ್ದಾಣದ ಬಳಿ ನಡೆದಿದೆ.

ಘಟನೆಯಲ್ಲಿ ರೈಲಿನ ಆರು ಬೋಗಿಗಳು ಸೇತುವೆ ಮೇಲೆ ನಿಂತಿದ್ದವು. ಇನ್ನೊಂದಿಷ್ಟು ಬೋಗಿಗಳು ಮಲ್ಲೇಶ್ವರ ರೈಲ್ವೆ ಕ್ರಾಸಿಂಗ್‌ ಬಳಿ ನಿಂತಿದ್ದವು. ಘಟನೆಯಿಂದ ಸ್ಥಳೀಯರು ಸೇರಿದಂತೆ ಪ್ರಯಾಣಿಕರಲ್ಲಿ ತೀವ್ರ ಆತಂಕ ಮೂಡಿಸಿತ್ತು.

ಸಾಮಾನ್ಯವಾಗಿ ಸೇತುವೆಗಳ ಮೇಲೆ ರೈಲುಗಳು ನಿಧಾನವಾಗಿ ಸಂಚರಿಸುತ್ತವೆ. ಈ ಹಿನ್ನೆಲೆಯಲ್ಲಿ ಬೋಗಿಗಳು ಬೇರ್ಪಟ್ಟರೂ ಯಾವುದೇ ಅಪಾಯ ಸಂಭವಿಸಿಲ್ಲ.

ಸ್ಥಳಕ್ಕಾಗಮಿಸಿದ ರೈಲ್ವೆ ಸಿಬ್ಬಂದಿ ಬೋಗಿಗಳನ್ನು ಮುಕ್ಕಾಲು ಗಂಟೆ ಕಾರ್ಯಾಚರಣೆ ನಡೆಸಿ ಮತ್ತೆ ಸೇರಿಸಿದರು. ಬಳಿಕ ಅಂತಿಮವಾಗಿ ರೈಲು ಮೈಸೂರು ಕಡೆಗೆ ಪ್ರಯಾಣ ಬೆಳೆಸಿತು.

Tags:
error: Content is protected !!