ಬೆಳಗಾವಿ : ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಿಪಿಇಡಿ ಮೈದಾನದಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಭಾಷಣವನ್ನು ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಅಡ್ಡಿಪಡಿಸಿದರು.
ಇದರಿಂದ ಕುಪಿತಗೊಂಡ ಸಿಎಂ ಸಿದ್ದರಾಮಯ್ಯ ಕೆಲಕಾಲ ಭಾಷಣ ನಿಲ್ಲಿಸಿ ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡರು.
ಯಾರ್ರಿ ಇಲ್ಲಿ ಎಸ್ಪಿ, ಪೊಲೀಸರು ಎನ್ ಮಾಡುತ್ತಿದ್ದಾರೆ ಎಂದು ಜೋರಾಗಿ ಗದರಿದರು. ಹಾಗೆಯೇ ಭಾಷಣ ಮುಂದುವರೆಸಿದ ಸಿಎಂ ನಾವು ಯಾರಿಗೂ ಹೆದರಲ್ಲ. ಜೈಭೀಮ್, ಜೈಬಾಪು, ಜೈ ಕಾಂಗ್ರೆ ಎಂದು ಘೋಷಣೆ ಕೂಗಿದರು.





