Mysore
33
scattered clouds

Social Media

ಭಾನುವಾರ, 20 ಏಪ್ರಿಲ 2025
Light
Dark

ಹಾಲಿನ ದರ ಏರಿಕೆ ಬೆನ್ನಲ್ಲೇ ರಾಜ್ಯದ ಜನತೆಗೆ ಕರೆಂಟ್‌ ಶಾಕ್‌

ಬೆಂಗಳೂರು: ಹಾಲಿನ ದರ ಏರಿಕೆ ಬೆನ್ನಲ್ಲೇ ರಾಜ್ಯದ ಜನತೆಗೆ ಕರೆಂಟ್‌ ಶಾಕ್‌ ಎದುರಾಗಿದ್ದು, ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ ಮಾಡಲಾಗಿದೆ.

ಈ ಕುರಿತು ಕೆಇಆರ್‌ಸಿ ಆದೇಶ ಹೊರಡಿಸಿದ್ದು, ಏಪ್ರಿಲ್.1ರಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ.

ಪ್ರತಿ ಯೂನಿಟ್‌ಗೆ ಪಿ & ಜಿ ಸರ್‌ ಚಾರ್ಜ್‌ 36 ಪೈಸೆ ದರ ಪಾವತಿಗೆ ಕೆಇಆರ್‌ಸಿ ಆದೇಶ ಹೊರಡಿಸಿದೆ. ಇನ್ನುಳಿದಂತೆ ವಿದ್ಯುತ್‌ ಶುಲ್ಕವನ್ನು ಕಡಿತಗೊಳಿಸಿದೆ.

ದರ ಏರಿಕೆ ಪ್ರಸ್ತಾವನೆಗೆ ಸರ್ಕಾರ ಕೂಡ ಒಪ್ಪಿಗೆ ಸೂಚಿಸಿದ್ದು, ಹೋಂಸ್ಟೇಗಳಿಗೆ ಇನ್ನು ಮುಂದೆ ಗೃಹಬಳಕೆಯ ವಿದ್ಯುತ್‌ ಬಿಲ್‌ ಜಾರಿಯಾಗಲಿದೆ.

ಈ ಮೂಲಕ ರಾಜ್ಯದ ಜನತೆಗೆ ಒಂದೇ ದಿನ ಎರಡು ಶಾಕ್‌ ಎದುರಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

 

Tags: