Mysore
20
mist

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ವಿಜಯ್‌ ಹಜಾರೆ ಟ್ರೋಫಿ: ಸೆಮಿಫೈನಲ್‌ ತಲುಪಿದ ಕರ್ನಾಟಕ

ವಡೋದರಾ: ಬರೋಡಾ ವಿರುದ್ಧದ ಕ್ವಾಟರ್‌ ಫೈನಲ್‌ ಪಂದ್ಯದಲ್ಲಿ 5 ರನ್‌ಗಳಿಂದ ಗೆಲುವು ಸಾಧಿಸುವ ಮೂಲಕ ಕರ್ನಾಟಕ ತಂಡ ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಸೆಮಿ ಫೈನಲ್‌ ಪ್ರವೇಶಿಸಿದೆ.

ಇಲ್ಲಿನ ಮೋತಿ ಬಾಗ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತರು ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಕರ್ನಾಟಕ ತಂಡ, ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 281 ರನ್‌ ಕಲೆ ಹಾಕಿತು. ಬ್ಯಾಟರ್‌ಗಳ ವೈಫಲ್ಯದ ನಡುವೆಯು ಮಿಂಚಿದ ಆರಂಭಿಕ ಬ್ಯಾಟರ್‌ ದೇವದತ್ತ ಪಡಿಕ್ಕಲ್‌ ಅಮೋಘ ಶತಕ 102(99) ಹಾಗೂ ಅನೀಶ್‌ ಕೆವಿ 52(64) ಅರ್ಧಶತಕ ಸಿಡಿಸುವ ಮೂಲಕ ಸ್ಪರ್ಧಾತ್ಮಕ ಮೊತ್ತ ನೀಡಲು ನೆರವಾದರು.

ಈ ಗುರಿ ಬೆನ್ನತ್ತಿದ್ದ ಬರೋಡಾ ತಂಡ 49.5 ಓವರ್‌ಗಳಲ್ಲಿ 276 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ವಿರೋಚಿತ ಸೋಲೊಪ್ಪಿಕೊಂಡು ಟೂರ್ನಿಯಿಂದ ಹೊರ ನಡೆಯಿತು.

ಬರೋಡಾದ ಪರ ಆರಂಭಿಕ ಬ್ಯಾಟರ್ ಶಾಶ್ವತ್‌ ರಾವತ್‌‌ ಶತಕ 104(126) ಬಾರಿಸಿದರು ಗೆಲುವಿನ ಕಡೆ ಕೊಂಡೊಯ್ಯುವಲ್ಲಿ ವಿಫಲವಾದರು.

 

 

Tags:
error: Content is protected !!