Mysore
30
broken clouds

Social Media

ಶನಿವಾರ, 19 ಸೆಪ್ಟೆಂಬರ್ 2026
Light
Dark

ಮೂರು ಕ್ರಿಮಿನಲ್‌ ಕಾಯ್ದೆಗಳ ಜಾರಿ ಮುಂದೂಡುವಂತೆ ಪ್ರಧಾನಿಗೆ ಪತ್ರ ಬರೆದ ಸಿಎಂ ಬ್ಯಾನರ್ಜಿ!

ಪಶ್ಚಿಮ ಬಂಗಾಳ: ಇದೇ ಜುಲೈ 1ರಿಂದ ಜಾರಿಯಾಗಲಿರುವ ಪ್ರಮುಖ ಮೂರು ಕ್ರಿಮಿನಲ್‌ ಕಾಯ್ದೆಗಳನ್ನು ಮುಂದೂಡುವಂತೆ ಕೋರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಕ್ರಿಮಿನಲ್‌ ಕಾಯ್ದೆಗಳ ಜಾರಿ ಮುಂದೂಡಿಕೆಯು ನೂತನ ಸಂಸತ್ತಿನಲ್ಲಿ ಕಾನೂನಿನ ಕುರಿತಾದ ಮರು ಪರಿಶೀಲನೆಗೆ ಅವಕಾಶ ಕಲ್ಪಿಸುತ್ತದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

1872 ಭಾರತ ಸರ್ಕಾರದಲ್ಲಿ ಜಾರಿಗೆ ಬಂದಿರುವ ವಸಾಹತುಸಾಹಿ ಕಾಲದ ಭಾರತೀಯ ದಂಡ ಸಂಹಿತೆ, ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳಿಗೆ ಪರ್ಯಾಯವಾಗಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರೀಕಾ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಗಳನ್ನು ಕೇಂದ್ರ ಸರ್ಕಾರ ನೂತನ ಮೂರು ಕ್ರಿಮಿನಲ್‌ ಕಾಯ್ದೆಗಳನ್ನಾಗಿ ರಚಿಸಿದೆ.

ನ್ಯಾಯಾಂಗ ಮತ್ತು ನ್ಯಾಯಾಲಯ ನಿರ್ವಹಣಾ ವ್ಯವಸ್ಥೆಯನ್ನು ಮತ್ತು ಜನರಿಗೆ ನ್ಯಾಯವನ್ನು ವೇಗವಾಗಿ ಒದಗಿಸುವ ಉದ್ದೇಶವನ್ನು ಈ ಕಾನೂನುಗಳು ಒಳಗೊಂಡಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

Tags:
error: Content is protected !!