Mysore
17
clear sky

Social Media

ಮಂಗಳವಾರ, 20 ಜನವರಿ 2026
Light
Dark

ರಿಷಬ್‌ ಶೆಟ್ಟಿ ಹೊಗಳುವ ಭರದಲ್ಲಿ ಕಾಂತಾರ ದೈವಕ್ಕೆ ರಣವೀರ್‌ ಸಿಂಗ್‌ ಅಪಮಾನ ಆರೋಪ

ನಟ ರಿಷಬ್‌ ಶೆಟ್ಟಿ ಹೊಗಳುವ ಭರದಲ್ಲಿ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಕಾಂತಾರ ದೈವಕ್ಕೆ ಅಪಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮಾತನಾಡಿದ ರಣವೀರ್‌ ಸಿಂಗ್‌ ಅವರು, ಕಾಂತಾರ-1 ಚಿತ್ರವನ್ನು ಥಿಯೇಟ್‌ನಲ್ಲಿ ನೋಡಿದೆ. ರಿಷಬ್‌ ಶೆಟ್ಟಿ ಅವರ ಅಭಿನಯ ನಿಜವಾಗಿಯೂ ಅದ್ಭುತವಾಗಿದೆ. ಹೆಣ್ಣು ದೈವ ನಿಮ್ಮ ಮೇಲೆ ಬರುತ್ತಲ್ಲ ಅದು ಅದ್ಭುತ. ನಿಮ್ಮ ನಟನೆ ಸೂಪರ್‌ ಎಂದು ದೈವದ ಅನುಕರಣೆ ಮಾಡಿದ್ದಾರೆ. ಈ ಮೂಲಕ ಗುಳಿಗ ದೈವ, ಚಾಮುಂಡಿಗೆ ಅವಮಾನ ಮಾಡಿದ್ದಾರೆ.

ನಟ ರಣವೀರ್‌ ಕಾಂತಾರ ದೈವಕ್ಕೆ ಅವಮಾನ ಮಾಡಿದ್ದಾರೆ. ಚಿತ್ರೋತ್ಸವದಲ್ಲಿ ರಿಷಬ್‌ ಶೆಟ್ಟಿ ಅವರನ್ನು ಹೊಗಳುವ ಭರದಲ್ಲಿ ರಣವೀರ್‌ ಸಿಂಗ್‌ ವಿವಾದ ಉಂಟು ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

Tags:
error: Content is protected !!