ಮೈಸೂರು : ಯುವ ದಸರಾ ಸಂಗೀತ ಸಂಜೆಯಲಿ ಖ್ಯಾತ ಬಾಲಿವುಡ್ ಗಾಯಕ ಜುಬಿನ್ ನೌಟಿಯಾಲ್ ಅವರ ಗಾಯನದಲ್ಲಿ ಮೂಡಿ ಬಂದ ಬಾಲಿವುಡ್ ಹಾಡಿನ ಮೋಡಿಗೆ ಯುವ ಸಮೂಹ ಹುಚ್ಚೆದು ಕುಣಿದು, ತಲೆದೂಗಿದರು.
ನಗರದ ಹೊರವಲಯದ ವರ್ತುಲ ರಸ್ತೆಯ ಉತ್ತನಹಳ್ಳಿಯಲ್ಲಿ ಯುವ ದಸರಾ ಉಪ ಸಮಿತಿಯಿಂದ ಆಯೋಜಿಸಲಾಗಿದ್ದ ಮೂರನೇ ದಿನದ ಸಂಗೀತ ರಸಸಂಜೆಯಲಿ ಬಾಲಿವುಡ್ನ ಯುವ ಗಾಯಕ ಜುಬಿನ್ ನೌಟಿಯಾಲ್ ಅವರ ಸ್ವರದಲ್ಲಿ ಮೂಡಿದ ಹೇ ತೋ ದಿಲ್ ಯಹ್ ರುಕ್ ಜಾ ಜರಾ ಎಂಬ ಹಾಡಿಗೆ ನೆರೆದಿದ್ದ ಸಂಗೀತ ರಸಿಕರು ಕುಣಿದು, ಜತೆಗೆ ದನಿಗೂಡಿಸಿದರು.
ಮೊಹಬ್ಬತ್ ಕೆ ಮೇರಿ.. ಫಹಲಾ ಸರ್ಫ ಮೇ.., ಏಕ್ ಮುಲಾಕಾತ್ ಹು.. ತ ಮೇರೆ ಪಾಸ್ ಹೋ.., ನಾ ಚಯನೆ ಸೇ ಜೀನಾ ದೇದಿ, ನಾ ಚಯನೇ ಸೇ ಮರನಾ ದೇದಿ.., ಜಬ್ ಜಬ್ ತೇರೆ.. ಜಿಸ್ ಮೇ ಕಾ.. ಹಿಂದಿ ಗೀತೆಗಳನ್ನು ಜುಬಿನ್ ಗಿಟಾರ್ ಹಿಡಿದು, ಹೆಜ್ಜೆಹಾಕಿ ಎಲ್ಲರನ್ನು ರಂಜಿಸಿದರು. ಅಲ್ಲದೇ ಹೆಚ್ಚು ಬೇಡಿಕೆಯ ಸಯಾರಾ ಹಿಂದಿ ಚಲನಚಿತ್ರ ಗೀತೆ ತುಜಸೇ ರ್ದೂ ಮೇ ಕಿ ವಜ ಕೆ ಲಿಯೇ ಹೂ…. ಎಂದು ಹಾಡಿ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿದರು.
ತೆಲುಗು ಭಾಷಾ ಗಾಯಕ ಶ್ರೀರಾಮ್ ಚಂದ್ರ ಅವರು ವೇದಿಕೆ ಮೇಲೆ ಹಿಂದಿ ಹಾಡುಗಳಾದ ಯೇ ಜವಾನಿ ಹೇ ದಿವಾನಿ ಚಿತ್ರದ ಸುಬಾನ ಜೋ ಹೋ ರಹಾ ಹೇ… ಜವಾನ್ ಚಿತ್ರದ ಚಲಿಯಾ ತೇರಿ ಓ ಕೇ, ಚಲೆಯಾ ಹೇ ರ್ಜೋ ಕೇ.., ಕೇಸರಿಯಾ ತೇರಾ.., ರಬನೆ ಬನಾಯಾ.., ಎಂಬ ಗಾಯನದೊಂದಿಗೆ ನೃತ್ಯದ ಝಳಕ್ ಅನ್ನು ಸಹ ಪ್ರದರ್ಶಿಸಿದರು. ಜೊತೆಗೆ ಕನ್ನಡದ ಮುಂಗಾರು ಮಳೆ ಚಿತ್ರದ ಅನಿಸುತಿದೆ ಯಾಕೋ ಇಂದು.. ನೀನೇನೆ ನನ್ನವಳೆಂದು ಹಾಡುವ ಮೂಲಕ ಕನ್ನಡಿಗರ ಮನಸ್ಸನ್ನು ಕದ್ದರೇ, ಬ್ರಹ್ಮಾಸ್ತ್ರದ ದೇವಾ ದೇವಾ ಹೋ. ದಿ ಬೀಸ್ಟ್ ಚಿತ್ರ ಸೇರಿದಂತೆ ಸಾಕಷ್ಟು ಪ್ರಸಿದ್ಧ ತೆಲುಗು, ಹಿಂದಿ ಚಿತ್ರಗಳ ಹಾಡುಗಳನ್ನು ಹಾಡಿ ನೆರೆದಿದ್ದ ಯುವಕರು ವಯಸ್ಕರು ನಿಂತ ಕುಣಿದು ಕುಪ್ಪಳಿಸುವಂತೆ ಮಾಡಿ ಮನಸೂರೆಗೊಳಿಸಿದರು. ಬಳಿಕ ಗಾಯಕ ಚಿನ್ಮಯ್ ಆತ್ರೇಯ ಅವರಿಂದ ಕನ್ನಡದ ಜನಪ್ರಿಯ ನಾಯಕ ನಟ ಶಂಕರ್ನಾಗ್ ನಟನೆಯ ಚಲನಚಿತ್ರದ ಒಂದೇ ಒಂದು ಆಸೆಯು ತೋಳಲಿ ಬಳಸಲು… ಹಾಡಿ ಕನ್ನಡ ಪ್ರೇಮ ಮೆರೆದರು. ಅಲ್ಲದೇ ರೂಪು ತೇರಾ ಮಸ್ತಾನ, ಪ್ಯಾರಾ ಮೇರಾ ದಿವಾನ ಎಂದು ಹಳೆಹಾಡುಗಳ ಗೀತೆಗಾಯನ ಅದ್ದೂರಿಯಾಗಿ ನಡೆಸಿದರು. ಅಲ್ಲದೇ ಕನ್ನಡಿಗರಲ್ಲಿ ಮತ್ತಷ್ಟು ಕುಣಿತಕ್ಕೆ ಕಿಚ್ಚು ಹಚ್ಚಲು ಡಾ.ರಾಜ್ ಕುಮಾರ್ ಅವರ ಹೊಸ ಬೆಳಕು ಮೂಡುತ್ತಿದೆ… ರವಿಚಂದ್ರನ್ ಅವರ ಯಾರೇ ನೀನು ರೋಜಾ ಹೂವೆ, ಯಾರೇ ನೀನು ಮಲ್ಲಿಗೆ ಹೂವೇ… ಕನ್ನಡದ ಹಾಡಿಗೆ ಧ್ವನಿಗೂಡಿಸಿ ಜನರಿಗೆ ಮನರಂಜನೆ ರಸದೌತಣ ಬಡಿಸಿದರು.
ಕರ್ನಾಟಕ ರೇಷ್ಮೆ ಉದ್ಯಮದ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕಿ ಝಹೀರಾ ನಾಸೀಂ, ವಿಧಾನ ಪರಿಷತ್ ಸದಸ್ಯ ಸಿ.ಎನ್ ಮಂಜೇಗೌಡ, ಜಿಽಕಾರಿ ಲಕ್ಷ್ಮೀಕಾಂತ ರೆಡ್ಡಿ ಹಾಗೂ ಉಪಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತಿತರರಿದ್ದರು.





