Mysore
19
clear sky

Social Media

ಸೋಮವಾರ, 09 ಮಾರ್ಚ್ 2026
Light
Dark

ವಿದೇಶಿ ಉದ್ಯೋಗ ಆಮಿಷ : ವಿದ್ಯಾರ್ಥಿಗೆ 1.80 ಕೋಟಿ ವಂಚನೆ!

ಮೈಸೂರು : ವಿದೇಶದಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದು ನಂಬಿಸಿ ಕೆರಳ ಮೂಲದ ಇಬ್ಬರು ದುಷ್ಕರ್ಮಿಗಳು ನಗರದ ವಿದ್ಯಾರ್ಥಿಯೋರ್ವನಿಗೆ 1.80 ಕೋಟಿ ರೂ. ಹಣವನ್ನು ವಂಚಿಸಿರುವ ಘಟನೆ ನಡೆದಿದೆ.

ನಗರದ ಕುವೆಂಪುನಗರ ನಿವಾಸಿ ಪ್ರಶಾಂತ ಎಂಬಾತನೇ ದುಷ್ಕರ್ಮಿಗಳಿಂದ ವಂಚನೆಗೆ ಒಳಗಾದವರು. ಅವರು ಪ್ರಶಾಂತ್ ಅವರು ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವೇಳೆ ಕೇರಳ ಮೂಲಕ ವಿಶ್ವನಾದನ್ ಹಾಗೂ ಸ್ನೇಹ ಮರಿಯಾ ಎಂಬವರ ಪರಿಚಯವಾಗಿದೆ.

ನಾವು ವಿದ್ಯಾಭ್ಯಾಸ ಮುಗಿಸಿ ಅಮೇರಿಕಾದಲ್ಲಿ ಕೆಲಸದಲ್ಲಿ ಇರುವುದಾಗಿ ಪ್ರಶಾಂತ್‌ಗೆ ಹೇಳಿದ್ದಾರೆ. ನಿನಗೂ ವಿದೆಶದಲ್ಲಿ ಕೆಲಸ ಕೊಡಿಸುತ್ತೇವೆ ಎಂದು ನಂಬಿಸಿದ್ದಾರೆ. ನಂತರ ಆತನನ್ನು ಬೆಂಗಳೂರು, ಹಾಂಗ್‌ಕಾಂಗ್ ಹಾಗೂ ದುಬೈಗೆ ಕರೆದೊಯ್ದಿದ್ದಾರೆ.

ನಂತರ ನಿನಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿದ ಅವರು, ಪ್ರಶಾಂತ್ ಮೂಲಕವೇ ಅವರ ಪೋಷಕರನ್ನು ನಂಬಿಸಿ ಹಂತಹಂತವಾಗಿ 1.80 ಕೋಟಿ ರೂ. ಹಣವನ್ನು ಪ್ರಶಾಂತ್ ಖಾತೆಗೆ ಹಾಕಿಸಿಕೊಂಡಿದ್ದಾರೆ.

ನಂತರ ಪ್ರಶಾಂತ್‌ನನ್ನು ಬೆದರಿಸಿ ಅಷ್ಟೂ ಹಣವನ್ನು ಆತನ ಖಾತೆಯಿಂದ ತಮ್ಮ ಖಾತೆಗೆ ವಗಾಯಿಸಿಕೊಂಡಿದ್ದಾರೆ. ನಂತರ ತನ್ನ ಸ್ನೇಹಿತರು ಹಾಗೂ ಸಂಬಂದಿಗಳ ಸಹಾಯದಿಂದ ಪ್ರಶಾಂತ್ ದುಬೈನಿಂದ ವಾಪಸ್ಸಾಗಿದ್ದು, ಇದೀಗ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Tags:
error: Content is protected !!