ಕಾರವಾರ: ಕ್ಯಾನ್ಸರ್ಗೆ ಯಶಸ್ವಿ ಚಿಕಿತ್ಸೆಯ ನಂತರ ತವರಿಗೆ ವಾಪಸ್ ಆಗಿರುವ ಹ್ಯಾಟ್ರಿಕ್ ಹೀರೊ ಶಿವರಾಜ್ಕುಮಾರ್ 29 ವರ್ಷಗಳ ಬಳಿಕ ಪ್ರವಾಸಿತಾಣವಾಗಿರುವ ಯಾಣಗೆ ಭೇಟಿ ನೀಡಿದ್ದಾರೆ.
ನಟ ಶಿವರಾಜ್ಕುಮಾರ್, ರಮೇಶ್ ಅರವಿಂದ್ ಹಾಗೂ ನಟಿ ಪ್ರೇಮಾ ಅವರು ನಟಿಸಿದ್ದ ಸೂಪರ್ ಹಿಟ್ ಸಿನಿಮಾ ʼನಮ್ಮೂರ ಮಂದಾರ ಹೂವೆʼ ಇದೇ ಸ್ಥಳದಲ್ಲಿ ಶೂಟಿಂಗ್ ಮಾಡಲಾಗಿತ್ತು.
ಹಳೆಯ ಪೋಟೊ ಹಾಗೂ ಇತ್ತೀಚೆಗೆ ಭೇಟಿ ಕೊಟ್ಟ ಪೋಟೊವನ್ನು ಶಿವಣ್ಣ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಶಿವಣ್ಣ ಜೊತೆ ಪತ್ನಿ ಗೀತಾ ಶಿವರಾಜ್ಕುಮಾರ್ ಕೂಡ ಯಾಣಗೆ ಭೇಟಿ ನೀಡಿದ್ದಾರೆ.