ಹುಣಸೂರು ತಾಲ್ಲೂಕಿನ ಉಯಿಗೊಂಡನಹಳ್ಳಿಯ ಬಸ್ ತಂಗುದಾಣದಿಂದ ಹಾದು ಹೋಗುವ ರಸ್ತೆ ದುಸ್ಥಿತಿಯಲ್ಲಿದೆ. ಈ ರಸ್ತೆಯಲ್ಲಿ ಅಲ್ಲಲ್ಲಿ ಜಲ್ಲಿ ಮತ್ತು ಮಣ್ಣಿನ ಗುಡ್ಡೆಗಳು, ಮರಳಿನ ಗುಡ್ಡೆಗಳನ್ನು ಹಾಕಲಾಗಿದೆ. ಕೆಲವರು ರಸ್ತೆಯಲ್ಲೇ ಹೂಗಿಡಗಳನ್ನು ಬೆಳೆದಿರುವುದರಿಂದ ಜನರು ತಿರುಗಾಡಲು, ಎತ್ತಿನಗಾಡಿ, ವಾಹನಗಳು ಸಂಚರಿಸಲು ತುಂಬಾ ತೊಂದರೆಯಾಗಿದೆ. ಆದ್ದರಿಂದ ಈ ರಸ್ತೆಯಲ್ಲಿ ಗುಡ್ಡೆ ಹಾಕಿರುವ ಜಲ್ಲಿ, ಮಣ್ಣು, ಮರಳು ಹಾಗೂ ಹೂ ಗಿಡಗಳನ್ನು ತೆರವುಗೊಳಿಸಿ ಜನರು ಮತ್ತು ವಾಹನಗಳು ತಿರುಗಾಡಲು ಗ್ರಾಮಪಂಚಾಯಿತಿ ಅಧ್ಯಕ್ಷರು ಮತ್ತು ಪಿಡಿಒ ಅವರು ಕ್ರಮವಹಿಸಬೇಕಾಗಿದೆ.
-ಅಂಗಡಿ ಮಹದೇವ, ಉಯಿಗೊಂಡನಹಳ್ಳಿ, ಹುಣಸೂರು ತಾ.





