ಕೊಳ್ಳೇಗಾಲ ತಾಲ್ಲೂಕಿನ ದೊಡ್ಡಿಂದುವಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುತ್ತಮುತ್ತಲಿನ ಅನೇಕ ಗ್ರಾಮಗಳಿಂದ ಅನಾರೋಗ್ಯಕ್ಕೊಳಗಾದವರು ಚಿಕಿತ್ಸೆ ಪಡೆಯಲು ಬರುತ್ತಾರೆ. ಆದರೆ ಈ ಆರೋಗ್ಯ ಕೇಂದ್ರದ ಬಾಗಿಲಿನ ಮುಂಭಾಗದಲ್ಲಿರುವ ಕಸವನ್ನು ತೆರವುಗೊಳಿಸಿಲ್ಲ. ! ಅನೇಕ ದಿನಗಳಿಂದ ಕಸಗಳ ಗುಪ್ಪೆ ವೃದ್ಧಿಯಾಗುತ್ತಿದ್ದು, ಸೊಳ್ಳೆ, ಜಿರಳೆ, ಇಲಿ, ಹೆಗ್ಗಣಗಳ ವಾಸಸ್ಥಾನವಾಗಿದೆ. ಆರೋಗ್ಯ ಕೇಂದ್ರದ ವಾತಾವರಣ ಶುಭ್ರವಾಗಿರಬೇಕೆಂಬ ಪ್ರಾಥಮಿಕ ಕಲ್ಪನೆಯೂ ಸಂಬಂಧಪಟ್ಟವರಿಗೆ ಇಲ್ಲವೇ? ವೈದ್ಯಾಧಿಕಾರಿಗಳಾಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಆರೋಗ್ಯ ಕೇಂದ್ರದ ಮುಂಭಾಗ ಮತ್ತು ಸುತ್ತಮುತ್ತ ಸ್ವಚ್ಛತೆ ಕಾಪಾಡುವುದಕ್ಕೆ ಆದ್ಯತೆ ಕೊಡಬೇಕು.
ನಾಗೇಶ್. ಮಾನಸಗಂಗೋತ್ರಿ, ಮೈಸೂರು




