ಪಾಂಡವಪುರ ತಾಲ್ಲೂಕಿನ ಮೇಲುಕೋಟೆ ಗ್ರಾಮದಲ್ಲಿ ಬಿಎಸ್ಎನ್ಎಲ್ ಮೊಬೈಲ್ ಗ್ರಾಹಕರು ಕಳೆದ ಐದಾರು ತಿಂಗಳುಗಳಿಂದ ನೆಟ್ವರ್ಕ್ ದೊರಕದೆ ಪರಿತಪಿಸುವಂತಾಗಿದೆ. ಈ ಬಗ್ಗೆ ಹಲವಾರು ಬಾರಿ ಗ್ರಾಹಕ ಸೇವಾ ಕೇಂದ್ರಕ್ಕೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗದೆ ಸುಮಾರು ೫೦೦ ಗ್ರಾಹಕರು ಬಿಎಸ್ಎನ್ಎಲ್ ತೊರೆದು ಬೇರೆ ಕಂಪೆನಿಗಳ ನೆಟ್ವರ್ಕ್ಗೆ ಪೋರ್ಟ್ ಆಗಿದ್ದಾರೆ.
ದಕ್ಷಿಣ ಬದರಿ ಎಂದು ಖ್ಯಾತವಾಗಿರುವ ಮೇಲುಕೋಟೆಗೆ ವರ್ಷವಿಡೀ ದೇಶದ ವಿವಿಧೆಡೆಗಳಿಂದ ಪ್ರವಾಸಿಗರು ಬರುತ್ತಾರೆ. ಆದರೆ ಅಸಮರ್ಪಕ ನೆಟ್ವರ್ಕ್ನಿಂದಾಗಿ ಪ್ರವಾಸಿಗರಿಗೂ ಅನನು ಕೂಲವಾಗುತ್ತಿದೆ. ಬಿಎಸ್ಎನ್ಎಲ್ನವರು ಕೂಡಲೇ ನೆಟ್ವರ್ಕ್ ಸಮಸ್ಯೆಯನ್ನು ಸರಿಪಡಿಸುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕಾಗಿದೆ.
– ವಿಜಯ್ ಹೆಮ್ಮಿಗೆ, ಮೈಸೂರು





