Mysore
31
few clouds

Social Media

ಶುಕ್ರವಾರ, 13 ಫೆಬ್ರವರಿ 2026
Light
Dark

ಓದುಗರ ಪತ್ರ | ವಿಧವಾ ಪಿಂಚಣಿ ಮೊತ್ತ ಹೆಚ್ಚಿಸಿ

ಓದುಗರ ಪತ್ರ

ರಾಜ್ಯದಲ್ಲಿ ವಿಧವಾ ಪಿಂಚಣಿ ಫಲಾನುಭವಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದರೆ ರಾಜ್ಯ ಸರ್ಕಾರ ಪಿಂಚಣಿ ಮೊತ್ತವನ್ನು ಮಾತ್ರ ಏರಿಕೆ ಮಾಡಿಲ್ಲ. ವಿಧವಾ ವೇತನವಾಗಿ ಸರ್ಕಾರ ಮಾಸಿಕ ೮೦೦ ರೂ. ಮಾತ್ರ ನೀಡುತ್ತಿದೆ. ಇದು ಅಲ್ಪ ಮೊತ್ತವಾಗಿದೆ. ಇದರಲ್ಲಿ ಕುಟುಂಬ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಮೂರು ಹೊತ್ತು ಹೊಟ್ಟೆತುಂಬ ಊಟ, ಮೈತುಂಬಾ ಬಟ್ಟೆಗೆ ಅಗತ್ಯವಾದಷ್ಟು ಹಣವಾದರೂ ದೊರೆತರೆ ಈ ಪಿಂಚಣಿ ಫಲಾನುಭವಿಗಳ ಬದುಕಿಗೆ ಭದ್ರನೆಲೆ ದೊರೆತಂತೆ ಆಗುತ್ತದೆ. ಇವರಿಗೆ ಇತರೆ ಖರ್ಚುಗಳೂ ಇರುತ್ತವೆ ಎಂಬುದನ್ನು ಮರೆಯುವಂತಿಲ್ಲ.

ಅಲ್ಲದೆ, ಅಡುಗೆ ಸಾಮಾನುಗಳು, ದವಸ ಧಾನ್ಯಗಳು ಹಾಗೂ ತರಕಾರಿಗಳ ಬೆಲೆಗಳಲ್ಲಿ ಹೆಚ್ಚಳ ಆಗುತ್ತಲೇ ಇದೆ. ಹಾಗೆಯೇ ಮಕ್ಕಳ ವಿದ್ಯಾಭ್ಯಾಸದ ಖರ್ಚು ಕೂಡ ಇರುತ್ತದೆ. ಹೀಗಿರುವಾಗ ಸರ್ಕಾರ ಕೊಡುವ ಪಿಂಚಣಿ ಹಣದಿಂದ ಜೀವನ ಸಾಗಿಸುವುದು ಸಾಧ್ಯವೆ? ಆದ್ದರಿಂದ ಸರ್ಕಾರ ಕೂಡಲೆ ವಿಧವಾ ವೇತನವನ್ನು ಮಾಸಿಕ ೧,೫೦೦ ರೂ. ಗೆ ಹೆಚ್ಚಿಸಿದರೆ ಬಡ ಫಲಾನುಭವಿಗಳ ಬದುಕಿಗೆ ಅನುಕೂಲವಾಗುತ್ತದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಽಗಳು ಗಂಭೀರವಾಗಿ ಚಿಂತಿಸಿ, ಸೂಕ್ತ ಕ್ರಮಕೈಗೊಳ್ಳಬೇಕು.
-ಸಿದ್ದಲಿಂಗೆಗೌಡ, ಹೈರಿಗೆ, ಎಚ್. ಡಿ. ಕೋಟೆ ತಾ.

Tags:
error: Content is protected !!