Mysore
26
overcast clouds

Social Media

ಬುಧವಾರ, 05 ಆಗಸ್ಟ್ 2026
Light
Dark

ಓದುಗರ ಪತ್ರ | ಗಣಪತಿ ವಿಸರ್ಜಿಸುವ ವೇಳೆ ಜಾಗ್ರತೆ ವಹಿಸಿ

ಗಣೇಶ ಹಬ್ಬವನ್ನು ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಗ್ರಾಮದ ಪ್ರತಿ ಬೀದಿಯಲ್ಲಿಯೂ ಯುವಕರು ಒಗ್ಗೂಡಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಂಭ್ರಮದಿಂದ ಪೂಜಿಸುತ್ತಾರೆ.

ಕೆಲವೆಡೆ ಮೂರು ದಿನಗಳ ಕಾಲ ಗಣಪತಿ ಮೂರ್ತಿಯನ್ನು ಕೂರಿಸಿ ಪೂಜಿಸಿದರೆ, ಇನ್ನೂ ಕೆಲ ಭಾಗಗಳಲ್ಲಿ ತಿಂಗಳುಗಟ್ಟಲೇ ಪೂಜಿಸುವವರೂ ಇದ್ದಾರೆ. ನಿಗದಿತ ಸಮಯ ಮುಗಿದ ಬಳಿಕ ಗಣಪತಿ ಮೂರ್ತಿಯನ್ನು ಕೆರೆ, ಬಾವಿ, ನದಿಯಲ್ಲಿ ವಿಸರ್ಜಿಸುವುದು ವಾಡಿಕೆ. ಈ ವೇಳೆ ನಿರ್ಲಕ್ಷ್ಯ ದಿಂದಾಗಿ ವಿಸರ್ಜಿಸಲು ಹೋದವರು ನೀರುಪಾಲಾದ ಸಾಕಷ್ಟು ಘಟನೆಗಳೂ ನಡೆದಿವೆ.

ಸ್ಥಳೀಯ ಆಡಳಿತ ಎಷ್ಟೇ ಜಾಗ್ರತೆವಹಿಸಿ ನಿಗದಿಪಡಿಸಿದ ಸ್ಥಳದಲ್ಲೇ ಗಣಪತಿ ವಿಸರ್ಜಿಸುವಂತೆ ಸೂಚಿಸಿದರೂ ಯಾವುದನ್ನೂ ಲೆಕ್ಕಿಸದೆ ಅಪಾಯಕಾರಿ ಸ್ಥಳಗಳಲ್ಲಿ ಗಣಪತಿ ಮೂರ್ತಿ ವಿಸರ್ಜಿಸಲು ಹೋಗಿ ಅಪಾಯಕ್ಕೆ ಈಡಾಗುತ್ತಿದ್ದಾರೆ. ಅಲ್ಲದೆ ರಾಸಾಯನಿಕ ಬಣ್ಣಗಳಿಂದ ಕೂಡಿದ ಗಣಪತಿ ಮೂರ್ತಿಗಳ ಬಳಕೆ ಹೆಚ್ಚಾಗುತ್ತಿದ್ದು, ಇವುಗಳನ್ನು ನೀರಿನ ಮೂಲಗಳಲ್ಲಿ ಬಿಡುವುದರಿಂದ ಜಲ ಮಾಲಿನ್ಯವೂ ಉಂಟಾಗುತ್ತಿದೆ. ಆದ್ದರಿಂದ ಸ್ಥಳೀಯ ಆಡಳಿತ ಪರಿಸರ ಸ್ನೇಹಿ ಗಣಪನ ಮೂರ್ತಿಯನ್ನು ಕೂರಿಸುವಂತೆ ಜಾಗೃತಿ ಮೂಡಿಸುವ ಜತೆಗೆ ಗಣಪತಿ ವಿಸರ್ಜನೆ ವೇಳೆ ಕೆರೆ, ನದಿ, ಬಾವಿಗಳ ಸಮೀಪ ದೋಣಿಗಳ ವ್ಯವಸ್ಥೆ ಮಾಡಿಕೊಳ್ಳುವಂತೆಯೂ ಸೂಚನೆ ನೀಡಬೇಕಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು.

Tags:
error: Content is protected !!