Mysore
21
overcast clouds

Social Media

ಶನಿವಾರ, 13 ಜೂನ್ 2026
Light
Dark

ನಾಳೆ ಮಲೆ ಮಹದೇಶ್ವರ ಜ್ಯೊತಿ ಆಗಮನ

ಗುಂಡ್ಲುಪೇಟೆ: ಕೆ.ಆರ್.ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿ ತ್ರಿವೇಣಿ ಸಂಗಮದಲ್ಲಿ ಅ.೧೩ರಂದು ನಡೆಯುವ ಕುಂಭಮೇಳದ ಹಿನ್ನೆಲೆಯಲ್ಲಿ ಮಲೆಮಹದೇಶ್ವರ ಬೆಟ್ಟದಿಂದ ಮಹದೇಶ್ವರ ಜ್ಯೋತಿಯು ಅ. ೮ ರಂದು ಪಟ್ಟಣಕ್ಕೆ ಆಗಮಿಸಲಿದೆ. ಅಂದು ಮಧ್ಯಾಹ್ನ ೧೨ರಿಂದ ೧ ಗಂಟೆಯವರೆಗೆ ತೆರಕಣಾಂಬಿ ಹುಂಡಿ ಪ್ರವೇಶಿಸಲಿದೆ.

ತಾಲ್ಲೂಕು ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಹಂಗಳ ನಂಜಪ್ಪ, ಜಿಲ್ಲಾ ನಿರ್ದೇಶಕ ಕುರುಬರಹುಂಡಿ ಲೋಕೇಶ್, ವೀರಶೈವ ಲಿಂಗಾಯತ ಮಹಾಸಭೆ ರಾಜ್ಯ ಸಮಿತಿ ಸದಸ್ಯ ಸುಜೇಂದ್ರ ಮುಖಂಡರು ಜ್ಯೋತಿಯನ್ನು ಸ್ವಾಗತಿಸಲಿದ್ದಾರೆ. ನಂತರ ಕಗ್ಗಳ, ಶಿಂಡನಪುರ ಹಾಗೂ ಬೇಗೂರು ಮಾರ್ಗವಾಗಿ ಹಿರೀಕಾಟಿ ತಲುಪಲಿದೆ. ಅಲ್ಲಿಂದ ನಂಜನಗೂಡಿಗೆ ಹೊರಡಲಿದೆ ಎಂದು ತಾಲ್ಲೂಕು ವೀರಶೈವ ಮಹಾಸಭೆ ಅಧ್ಯಕ್ಷ ಹಂಗಳ ನಂಜಪ್ಪ ತಿಳಿಸಿದರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!