ಮೈಸೂರು : ವಿದ್ಯಾರ್ಥಿಗಳಲ್ಲಿ ಸಮಾಜಸೇವೆ ಮನೋಭವನಯನ್ನು ಹೆಚ್ಚಿಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಪೂರಕವಾಗಿದೆ ,ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ನಿಟ್ಟಿನಲ್ಲಿ
ಎನ್ ಎಸ್ ಎಸ್ ಘಟಕಗಳು ನಿರಂತರವಾಗಿ ಕಾಲೇಜುಗಳಲ್ಲಿ ಸ್ವಯಂ ಪ್ರೇರಿತ ರಕ್ತದಾನ ಗಳಂತಹ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕರಾದ ಎಲ್ ನಾಗೇಂದ್ರ ಅಭಿಪ್ರಾಯಪಟ್ಟರು.
ನಗರದಲ್ಲಿಂದು ಲಯನ್ಸ್ ಕ್ಲಬ್ ಸೆಂಟರ್ ಜೀವದಾರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ,ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ ಷನ್ ಸೊಸೈಟಿ ,ಮತ್ತು ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ ಎನ್ ಎಸ್ ಎಸ್ ದಿನಾಚರಣೆ ಅಂಗವಾಗಿ ವಿವಿಧ ಕಾಲೇಜ್ ನ ಎನ್ಎಸ್ಎಸ್ ಕಾರ್ಯಕ್ರಮಗಳ ಸಂಯೋಜನೆ ಅಧಿಕಾರಿಗಳಾದ
ಟಿಟಿಎಲ್ ಕಾಲೇಜ್ ನ ಗಿರೀಶ್ , ಕಾವೇರಿ ಫಸ್ಟ್ ಗ್ರೇಡ್ ಕಾಲೇಜ್ ನ ಕೆ ವಿ ನಾಗಭೂಷಣ್ , ಎಂ ಎಂ ಕೆ & ಎಸ್ ಡಿಎಂ ಮಹಿಳಾ ಮಹಾವಿದ್ಯಾಲಯ ಕಾಲೇಜ್ ಬಿ ಎನ್ ಮಾರುತಿ ಪ್ರಸನ್ನ ,ಎನ್ ಐ ಇ ಕಾಲೇಜ್ ರಾಜೇಶ್ ಎಂ ,ಟೆರಿಷಿಯನ್ ಕಾಲೇಜ್ ಬಿ ರೇಖಾ ,ಎ ಟಿ ಎಂ ಇ ಕಾಲೇಜ್ ರುದ್ರೇಶ್ ಎ ಎನ್ ,ಕುವೆಂಪುನಗರದ ಫಸ್ಟ್ ಗ್ರೇಡ್ ಕಾಲೇಜ್ ನ ಎಸ್ ಜಿ ರಾಮದಾಸರೆಡ್ಡಿ ,ಎನ್ ಐ ಇ ಕಾಲೇಜ್ ಸಿ ಕೆ ವನಮಾಲಾ ರವರೆಗೆ ಸನ್ಮಾನಿಸಿ ಅಭಿನಂದಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಅಧಿಕಾರಿಗಳಾದ ಡಾ. ಮೊಹಮ್ಮದ್ ಸಿರಾಜ್ ಅಹಮದ್,ಲಯನ್ಸ್ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿಗಳಾದ ಡಾ. ರಾದ ಕೆ ಎಸ್ ,ಜಿಲ್ಲಾ ಐ. ಸಿ.ಟಿ.ಸಿ ಮೇಲ್ವಿಚಾರಕರು ಸವಿತ,ಜೀವದಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ಹಾಗೂ ಮುತ್ತಣ್ಣ ಸಿ ಜಿ ,ಡಾ ಮಮತಾ ,ರಶ್ಮಿ ,ಸುರೇಶ್ ,ಪ್ರಭು ,ಕೇಬಲ್ ವಿಜಿ,ಸೂರಜ್ ,ಸದಾಶಿವ ,ಹಾಗೂ ಇನ್ನಿತರರು ಹಾಜರಿದ್ದರು





