Mysore
21
overcast clouds

Social Media

ಭಾನುವಾರ, 14 ಜೂನ್ 2026
Light
Dark

ಜೋರುಮಳೆಗೆ ಸೋಮಣ್ಣ ಲೇಔಟ್ ಜಲಾವೃತ್ತ: ಆಗ್ನಿಶಾಮಕದಳದಿಂದ ವಯೋವೃದ್ದರ ಸ್ಥಳಾಂತರ

ಚಾಮರಾಜನಗರ: ಗುರುವಾರ ರಾತ್ರಿ ಸುರಿದ ಜೋರುಮಳೆಗೆ  ನಗರದ 15ನೇ ವಾರ್ಡ್ ನ ಸೋಮಣ್ಣ ಲೇಔಟ್ ಜಲಾವೃತ್ತವಾಗಿದ್ದು, ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟು ಮಾಡಿದೆ.

ಸ್ಥಳಕ್ಕೆ ವಾರ್ಡ್ ಸದಸ್ಯ ಆರ್.ಪಿ.ನಂಜುಂಡಸ್ವಾಮಿ ಭೇಟಿ ನೀಡಿಪರಿಶೀಲಿಸಿದರು.

ನಂತರ  ಆಗ್ನಿಶಾಮಕ ದಳಕ್ಕೆ ಮಾಹಿತಿಕೊಟ್ಟು ಕರೆಸಿ
ಜಲಾವೃತ ಮನೆಗಳಿಂದ ವಯೋವೃದ್ದರನ್ನು   ಸ್ಥಳಾಂತರ ಮಾಡಿಸಿದರು. ಸಂತ್ರಸ್ಥರನ್ನು ಭೇಟಿ ಸಾಂತ್ವಾನ ಹೇಳಿ ಧೈರ್ಯ ತುಂಬಿದರು.


ಬಳಿಕ ಮಾತನಾಡಿ, 15 ವಾರ್ಡ್ ನ ಜೋಡಿರಸ್ತೆಗೆ ಹೊಂದಿಕೊಂಡಂತಿರುವ ರಾಜಕಾಲುವೆಗೆ ಅವೈಜ್ಞಾನಿಕ ಸೇತುವೆ ನಿರ್ಮಾಣ ಮಾಡಿರುವುದ್ದರಿಂದ ಜೋರುಮಳೆಯಾದರೆ ಪದೇಪದೇ ನಮ್ಮ ವಾರ್ಡ್ ನ ಕೆಲಭಾಗ ಜಲಾವೃತಗೊಂಡು ನಿವಾಸಿಗಳು ತುಂಬಾ ತೊಂದರೆಪಡುವಂತಾಗಿದೆ. ಈ.ಸಂಬಂಧ ಅನೇಕ ಬಾರಿ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ, ಅವರು ವಾರ್ಡ್ ಗೆ ಭೇಟಿ ನೀಡಿ ಪರಿಶೀಲಿಸಿ ಹೋದರೇ ವಿನಾ ಯಾವುದೇ ಕ್ರಮಕೈಗೊಂಡಿಲ್ಲ. ವಾರ್ಡ್ ಅಭಿವೃದ್ದಿ ಹಾಗೂ ನಗರದ ಅಭಿವೃದ್ದಿಗಾಗಿ ಹೋರಾಟ ಮಾಡಿದರೆ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ರಾಜಕೀಯ ಮಾಡಿ ನನ್ನ ಮೇಲೆ ದೂರು ದಾಖಲು ಮಾಡಿದ್ದಾರೆ.  ನಾವು ವಾರ್ಡ್ ಮತ್ತು ನಗರದ ಅಭಿವೃದ್ದಿಗಾಗಿ ಹೋರಾಟ ಮಾಡುವಂಗಿಲ್ಲವೇ ಎಂದು ಪ್ರಶ್ನಿಸಿದರು.
ಮಳೆನೀರಿನಿಂದ  ಸುಮಾರು 100 ಕ್ಕೂ ಹೆಚ್ವು ಮನೆಗಳು ಜಲಾವೃತವಾಗಿದ್ದು, ತುಂಬಾ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಮಳೆಹಾನಿ ಸೂಕ್ತ ಪರಿಹಾರ ಕೊಡಬೇಕು. ಅಲ್ಲದೆ  ಇದು ಕೊಳೆಚೆ ಪ್ರದೇಶವಾಗಿರುವುದ್ದರಿಂದ ಶಾಶ್ವತ ಮನೆಗಳನ್ನು  ನಿರ್ಮಿಸಿಕೊಡಬೇಕು , ವಾರ್ಡನ ರಾಜಕಾಲುವೆಗೆ ಅವೈಜ್ಞಾನಿಕ ನಿರ್ಮಿಸಿರುವ ಸೇತುವೆಯನ್ನು ತೆರವುಗೊಳಿಸಬೇಕು ಆರ್.ಪಿ.ನಂಜುಂಡಸ್ವಾಮಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಾರ್ಡ ನಿವಾಸಿಗಳಾದ ಮನೋಜ್, ರವಿ, ಬಸವಣ್ಣ, ಗಣೇಶ ಇತರರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!